Advertisement

ಮಲೆನಾಡಿನ ಹರ್ಷ ಕದಡಿದ ಹತ್ಯೆ

03:09 PM Feb 22, 2022 | Adarsha |

ಶಿವಮೊಗ್ಗ: ಭಜರಂಗದಳದ ಕಾರ್ಯಕರ್ತಸೀಗೆಹಟ್ಟಿಯ ಹರ್ಷ ಅವರನ್ನು (28)ಭಾನುವಾರ ರಾತ್ರಿ ಭಾರತೀ ಕಾಲೋನಿಯಬಳಿ ಬರ್ಬರವಾಗಿ ಹತ್ಯೆ ಮಾಡಿರುವಘಟನೆ ಹಿನ್ನೆಲೆಯಲ್ಲಿ ಸೋಮವಾರನಗರದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.ಭಜರಂಗ ದಳದ ಕಾರ್ಯಕರ್ತನಾಗಿದ್ದಹರ್ಷ ಹಿಂದುತ್ವ, ಗೋ ರಕ್ಷಣೆಯಂತಹವಿಚಾರಗಳಲ್ಲಿ ತೊಡಗಿಕೊಂಡಿದ್ದರು.

Advertisement

ವಿಶ್ವಹಿಂದೂ ಪರಿಷತ್‌ ಕೋಟೆ ಪ್ರಖಂಡದಸಹ ಕಾರ್ಯದರ್ಶಿಯಾಗಿದ್ದು ಹಿಂದೂಮಹಾಸಭಾ ಗಣಪತಿ ವಿಸರ್ಜನಾಸಂದರ್ಭದಲ್ಲಿ ಗಣಪತಿ ಅಲಂಕಾರದಲ್ಲಿಮುಂಚೂಣಿಯಲ್ಲಿರುತ್ತಿದ್ದರು.ಭಾನುವಾರ ರಾತ್ರಿ ಎಗ್‌ರೈಸ್‌ ತಿಂದುಬರುತ್ತೇನೆಂದು ಮನೆಯಿಂದ ಹೋದವೇಳೆ ಎನ್‌.ಟಿ. ರಸ್ತೆಯ ಕಾಮತ್‌ಪೆಟ್ರೋಲ್‌ ಬಂಕ್‌ ಎದುರು ಭಾರತೀಕಾಲೋನಿ ಕ್ರಾಸ್‌ ರಸ್ತೆಯಲ್ಲಿ ಕೆಲದುಷ್ಕರ್ಮಿಗಳು ಮಾರಕಾಸ್ತ್ರಗಳಿಂದಮಾರಣಾಂತಿಕವಾಗಿ ಹಲ್ಲೆಗೈದಿದ್ದರು.

ತೀವ್ರರಕ್ತಸ್ರಾವಗೊಂಡಿದ್ದ ಈತನನ್ನು ಮೆಗ್ಗಾನ್‌ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂಫಲಿಸದೆ ಮೃತಪಟ್ಟಿದ್ದ.ಈ ಬಗ್ಗೆ ಮೃತನ ತಾಯಿ ನೀಡಿರುವದೂರಿನನ್ವಯ ಪೊಲೀಸರು ಪ್ರಕರಣದಾಖಲಿಸಿ ಇಬ್ಬರನ್ನು ವಶಕ್ಕೆ ಪಡೆದುತನಿಖೆ ಮುಂದುವರಿಸಿದ್ದಾರೆ. ಮುನ್ನೆಚ್ಚರಿಕೆಕ್ರಮವಾಗಿ ಶಿವಮೊಗ್ಗ ಹಾಗೂ ಭದ್ರಾವತಿನಗರಗಳಲ್ಲಿ ಸೋಮವಾರ ಮತ್ತುಮಂಗಳವಾರ ಎರಡು ದಿನಗಳ ಕಾಲಸೆಕ್ಷನ್‌ 144 ಜಾರಿ ಮಾಡಲಾಗಿದೆ.ಅಲ್ಲದೇ ಸೋಮವಾರ ಅವಳಿ ನಗರಗಳಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next