Advertisement

ಗ್ರಾ.ಪ ಚುನಾವಣೆ :ಮತದಾರರಿಗೆ ಆಮಿಷವೊಡ್ಡಲು ತಂದಿಟ್ಟಿದ್ದ 100ಕ್ಕೂ ಹೆಚ್ಚು ಕುಕ್ಕರ್ ವಶ

06:40 PM Dec 21, 2020 | sudhir |

ಶಿವಮೊಗ್ಗ : ರಾಜ್ಯದೆಲ್ಲೆಡೆ ಮಂಗಳವಾರ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು ಆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ತಂದಿದ್ದ ನೂರಕ್ಕೂ ಹೆಚ್ಚು ಕುಕ್ಕರ್ ಗಳನ್ನು ವಶಪಡಿಸಿಕೊಂಡ ಘಟನೆ ಶಿವಮೊಗ್ಗ ತಾಲೂಕಿನ ನಿದಿಗೆ ಗ್ರಾಮದಲ್ಲಿ ನಡೆದಿದೆ.

Advertisement

ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ತಾಲೂಕಿನ ಇಓ ಚಂದ್ರಶೇಖರ್ ನೇತೃತ್ವದಲ್ಲಿ ದಾಳಿ ನಡೆಸಿ ಮೂರು ಲೀಟರ್ ಸಾಮಾರ್ಥ್ಯದ 130 ಕುಕ್ಕರ್ ಗಳು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮೇಲ್ನೋಟಕ್ಕೆ ನಿದಿಗೆ ಗ್ರಾಮ ಪಂಚಾಯಿತಿಗೆ ಸ್ಫರ್ಧಿಸಿದ್ದ ಅಭ್ಯರ್ಥಿಗೆ ಸಂಬಂಧಿಸಿದ ಕುಕ್ಕರ್ ಗಳು ಎಂದು ತಿಳಿದುಬಂದಿದ್ದು ಕುಕ್ಕರ್ ನ ಬಾಕ್ಸ್ ಮೇಲೆ ಅಭ್ಯರ್ಥಿಯ ಫೋಟೋ ಮತ್ತು ಮಾಹಿತಿ ಪತ್ತೆಯಾಗಿದೆ.

ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ ಅಧಿಕಾರಿಗಳು.

ಇದನ್ನೂ ಓದಿ:400 ವರ್ಷಗಳ ಹಿಂದೆ ಸಂಭವಿಸಿತ್ತು ಸಂಗಮ!ಬಾಹ್ಯಾಕಾಶದಲ್ಲಿ ಡಿ.21ರ ರಾತ್ರಿ ಸಹಸ್ರಮಾನದ ಅಚ್ಚರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next