Advertisement
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಶುಕ್ರವಾರ ನಗರದ ಚಂದನ ಸಭಾಂಗಣದಲ್ಲಿ ವರ್ತಮಾನದ ಬಿಕ್ಕಟ್ಟುಗಳು, ಬುದ್ಧ- ಬಸವ- ಗಾಂಧಿ- ಅಂಬೇಡ್ಕರ್ ವಿಚಾರ, ಸಂವಾದ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಡಾ| ಬಿ. ಆರ್. ಅಂಬೇಡ್ಕರ್ ಚಿಂತನೆಗಳ ಕುರಿತು ಹಿರಿಯ ಸಾಹಿತಿ, ಚಿಂತಕ ಡಾ| ರಾಜೇಂದ್ರ ಚೆನ್ನಿ ಅವರು ಮಾತನಾಡಿ, ಜಗತ್ತಿನಲ್ಲಿ ಅತಿಹೆಚ್ಚು ಶಿಕ್ಷಣ ಪಡೆದ ಜನನಾಯಕರಾಗಿದ್ದ ಕಾರಣ ದುಂಡುಮೇಜಿನ ಪರಿಷತ್ತಿನಲ್ಲಿ ಭಾಗವಹಿಸುವ ಅವಕಾಶ ಅವರಿಗೆ ದೊರೆಯಿತು. ಅಲ್ಲಿ ಅವರಾಡಿದ ಮಾತುಗಳ ಬ್ರಿಟಿಷ್ ಸರ್ಕಾರದ ಗಮನ ಸೆಳೆಯುವಂತೆ ಮಾಡಿದ್ದನ್ನು ವಿವರಿಸಿದರು. ಪ್ರತ್ಯೇಕ ಪ್ರಾತಿನಿಧ್ಯ ಕೊಡಬೇಕು. ನಮಗೆ ಮೀಸಲು ಕ್ಷೇತ್ರ ಕೊಡಬೇಕು. ಸಮಾಜದಲ್ಲಿ ಅಕ್ಷರಜ್ಞಾನ, ಸಮಾನತೆಯಿಲ್ಲದಿದ್ದರೆ, ಶೋಷಣೆಗೆ ಒಳಗಿರುವ ಜನರಿಗೆ ನಾವು ನ್ಯಾಯ ಕೊಡಿಸಲು ಇರುವ ಅವಕಾಶವೆಂದರೆ ಅದು ಪಾರ್ಲಿಮೆಂಟ್ ಮಾತ್ರ. ಎಂದು ಪ್ರತಿಪಾದಿಸಿದ್ದನ್ನು ಅವರು ವಿವರಿಸಿದರು.
ಗಾಂಧಿ ಚಿಂತನೆ ಕುರಿತು ಸಾಹಿತಿಗಳು, ಚಿಂತಕರಾದ ಡಾ| ಎಚ್. ಟಿ. ಕೃಷ್ಣಮೂರ್ತಿ ಅವರು ಗಾಂಧಿ ಅವರು ಸಾರ್ವಜನಿಕವಾಗಿ ಅನೇಕ ಟೀಕೆಗಳನ್ನು ಎದುರಿಸಿದವರು. ಅವರಷ್ಟು ಸಾರ್ವಜನಿಕವಾಗಿ ತೆರೆದುಕೊಂಡ ವ್ಯಕ್ತಿತ್ವ ಬೇರೊಂದು ಸಿಗದು ಎಂದು ಅವರ ವಿಚಾರಗಳು ಇವತ್ತಿನ ಬಿಕ್ಕಟ್ಟುಗಳನ್ನು ಕುರಿತು ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಎಸ್. ಎನ್. ನಾಗರಾಜ್, ಕುವೆಂಪು ಶಿಕ್ಷಣ ಮಹಾವಿದ್ಯಾಲಯ ಸಮಿತಿ ಅಧ್ಯಕ್ಷರಾದ ಕಡಿದಾಳು ಗೋಪಾಲ ಅವರು ಮುಖ್ಯ ಅತಿಥಿಗಳಾಗಿದ್ದರು. ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಶಾಲಿನಿ ಜೆ., ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಕೆ. ಪ್ರಕಾಶ್ ಇದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಸೂರ್ಯಪ್ರಕಾಶ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಹಾದೇವ್ ಸ್ವಾಮಿ ವಂದಿಸಿದರು.