Advertisement

ರಾಷ್ಟ್ರೀಯತೆಯ ಹೆಸರಲ್ಲಿ ಆತಂಕ ಸೃಷ್ಟಿ: ಮಂಜುನಾಥ

07:03 PM Oct 14, 2019 | Naveen |

ಶಿವಮೊಗ್ಗ: ಬಹುತ್ವದ ಭಾರತದಲ್ಲಿ ಪ್ರಾದೇಶಿಕತೆಯನ್ನು ರಾಷ್ಟ್ರೀಯತೆಯ ಹೆಸರಲ್ಲಿ ಕತ್ತಿ ಮಸೆದು ಆತಂಕ ಸೃಷ್ಟಿಸಿ ಹೊಸ ಸಮಸ್ಯೆಗೆ ಅಡಿಗಲ್ಲಿಡುವ ಕಾರ್ಯವನ್ನು ರಾಷ್ಟ್ರೀಯ ಪಕ್ಷಗಳು ಮಾಡಲು ಹವಣಿಸುತ್ತಿದ್ದು ಆತಂಕ ಕಾಡುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಿ. ಮಂಜುನಾಥ ಅಭಿಪ್ರಾಯಪಟ್ಟರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಜಾನಪದ ಪರಿಷತ್‌ ಸಂಯುಕ್ತಾಶ್ರಯದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖಾ ಮಠದ ಆವರಣದಲ್ಲಿ ಏರ್ಪಡಿಸಿದ್ದ ದಸರಾ ಕವಿಗೋಷ್ಠಿ ಮತ್ತು ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಯ ಹಿರಿಮೆಯನ್ನು ಒಮ್ಮೆ ಅವಲೋಕಿಸಿದರೆ ಹಿಂದಿಯ ಪಾತ್ರದ ಅರಿವಾಗುತ್ತದೆ. ತ್ರಿಭಾಷಾ ಸೂತ್ರ ಒಪ್ಪಿಕೊಂಡು ಹಲವು ವರ್ಷಗಳಾಗಿವೆ. ಕಲಿಯಲು, ಕಲಿಸಲು ಪ್ರಯತ್ನ ಮಾಡದ ಸರ್ಕಾರಗಳು ನಮ್ಮದಲ್ಲದ ಭಾಷೆಯನ್ನು ಹೇರುವ ಮೂಲಕ ಪ್ರಾದೇಶಿಕತೆ ಹತ್ತಿಕ್ಕುವ ಪ್ರಯತ್ನ ಮಾಡುತ್ತಿವೆ ಎನ್ನುವ ಅನುಮಾನ ಕಾಡುತ್ತಿದೆ. ಆಗಾಗ್ಗೆ ನಮ್ಮ ಪ್ರಜ್ಞೆಯನ್ನು ಪರೀಕ್ಷೆ ಮಾಡುವ ಪ್ರಯತ್ನ ದೆಹಲಿ ಮೂಲದಿಂದ ನಡೆಯುತ್ತಲೇ ಇರುತ್ತದೆ. ಅಂತಹ ಎಲ್ಲಾ ಸಂದರ್ಭಗಳನ್ನೂ ಪ್ರತಿಭಟಿಸಲೇಬೇಕು
ಎಂದರು. ಕವಿಗಳಾದ ನಾಗರಕೊಡಿಗೆ ಗಣೇಶ್‌ ಮೂರ್ತಿ ಅವರು ಕನ್ನಡ ನುಡಿ, ಕನ್ನಡ ತೇರು ಕವನ ವಾಚಿಸುವ ಮೂಲಕ ಚಾಲನೆ ನೀಡಿದರು.

ಕುವೆಂಪು ವಿವಿಯ ಡಾ| ನೆಲ್ಲಿಕಟ್ಟೆ ಸಿದ್ದೇಶ್‌, ರಮೇಶ್‌, ರಿಪ್ಪನ್‌ಪೇಟೆಯ ಮಂಜುನಾಥ ಕಾಮತ್‌, ಗುಣಾ ಶಂಕರಘಟ್ಟ, ಪ್ರೊ| ಸತ್ಯನಾರಾಯಣ, ವಿನೋದ ಆನಂದ, ಪ್ರಕಾಶ್‌ ಕೆ. ನಾಡಿಗೇರ್‌ ಮತ್ತಿತರರು ಕವನ ವಾಚಿಸಿದರು.

ಜನಪದ ಕಲಾ ಪ್ರದರ್ಶನದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದ ಭದ್ರಾವತಿ ತಾಲೂಕು ಕರ್ನಾಟಕ ಜಾನಪದ ಪರಿಷತ್ತಿನ ಗೌರವಾಧ್ಯಕ್ಷ ವೆಂಕಟರಮಣ ಶೇಟ್‌, ಮುಖ್ಯ ಅತಿಥಿಗಳಾಗಿದ್ದ ದಿನೇಶ್‌ ಹಂತವಾನಿ ಮಾತನಾಡಿದರು. ಅಡಕೆಯ ಕುರಿತು ಸಂಶೋದನಾ ಪ್ರಬಂಧ ಬರೆದು ಡಿ.ಲಿಟ್‌ ಪಡೆದ ಡಾ| ಕಡಿದಾಳು ಗೋಪಾಲ್‌ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

Advertisement

ತನ್ನ ಐವತ್ತು ವರ್ಷಗಳ ಅಡಕೆಯೊಂದಿಗಿನ ನಂಟು ನನಗೆ ಪ್ರೇರಣೆ ಆಯಿತು ಎಂದು ವಿವರಿಸಿದರು. ಎಸ್‌. ಎಲ್‌. ವಿನೋಧ, ಕೆ.ಎಸ್‌. ಅನುರಾಧ ಇದ್ದರು.

ಕಾರ್ಯದರ್ಶಿ ಡಿ. ಗಣೇಶ್‌, ಡಾ| ಕವಿತಾ ಸಾಗರ, ಸೂರ್ಯಪ್ರಕಾಶ್‌, ಶಿವಪ್ಪ ಗೌಡ, ಆರ್‌. ಜಯಪ್ರಕಾಶ್‌ ವಿವಿಧ ಕಾರ್ಯಗಳನ್ನು ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next