Advertisement

ಮರಗಳ ಕಡಿತ: ಪರಿಸರವಾದಿಗಳ ವ್ಯಾಪಕ ಆಕ್ರೋಶ

06:45 PM Apr 13, 2021 | Team Udayavani |

 ಸಾಗರ: ತಾಲೂಕಿನ ಖಂಡಿಕಾ ಗ್ರಾಪಂನ ಕೋಡ್ಸರದ ಸೊಪ್ಪಿನ ಬೆಟ್ಟದಲ್ಲಿ ಅರಣ್ಯ ಇಲಾಖೆ ಅಧಿ ಕಾರಿಗಳು ಹಾಗೂ ಅರಣ್ಯ ನಾಟ ಗುತ್ತಿಗೆದಾರರು ಶಾಮೀಲಾಗಿ, ಗ್ರಾಮದ ಮನೆಯ ಮೇಲೆ ಕಾಡಿನ ಮರಗಳು ಉರುಳಿ ಅಪಾಯವಾಗಬಹುದು ಎಂಬ ಕಾರಣವೊಡ್ಡಿ ಏಳು ಅಪರೂಪದ ಬೃಹತ್‌ ಮರಗಳನ್ನು ಕಡಿದುರುಳಿಸಿದ ಘಟನೆ ಸೋಮವಾರ ನಡೆದಿದೆ.

Advertisement

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪರಿಸರ ಕಾರ್ಯಕರ್ತ, ಸ್ವಾನ್‌ ಆ್ಯಂಡ್‌ ಮ್ಯಾನ್‌ ಸಂಸ್ಥೆಯ ಕಾರ್ಯದರ್ಶಿ ಅಖೀಲೇಶ್‌ ಚಿಪ್ಪಳಿ ಪತ್ರಿಕೆಯೊಂದಿಗೆ ಮಾತನಾಡಿ, ಸ್ಥಳೀಯ ನಿವಾಸಿಗಳಿಂದ ಮನೆಗಳಿಗೆ ಅಪಾಯವಿದೆ ಎಂಬ ಮನವಿ ಪತ್ರವನ್ನು ನಾಟಾ ಗುತ್ತಿಗೆದಾರರು ಕೊಡಿಸುತ್ತಾರೆ. ಅಧಿ ಕಾರಿಗಳನ್ನು ಚೆನ್ನಾಗಿ ಉಪಚರಿಸಿ ಅನುಮತಿ ಪಡೆದುಕೊಳ್ಳಲಾಗುತ್ತದೆ. ನಂತರ ಈ ಮರಗಳ ಹರಾಜು ಪ್ರಕ್ರಿಯೆ ನಡೆಸಿ ಗುತ್ತಿಗೆದಾರರಿಗೆ ಅಧಿಕೃತವಾಗಿಯೇ ಕಾಡುಗಳ ನಾಶಕ್ಕೆ ಅನುಮತಿ ಕೊಡುವ ವ್ಯವಸ್ಥಿತ ತಂತ್ರ ಈಗ ಹೆಚ್ಚು ವ್ಯಾಪಕವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ನೂರಾರು ವರ್ಷ ಕಳೆದರೂ ಇಲ್ಲಿನ ಮರಗಳು ಮನೆಗಳಿಗೆ ಯಾವ ಹಾನಿಯನ್ನೂ ಉಂಟುಮಾಡುತ್ತಿರಲಿಲ್ಲ. ಒಂದು ದೊಡ್ಡ ಹಲಸು, ಮತ್ತೂಂದು ಸಣ್ಣಹಲಸು, ಬೃಹತ್‌ ಗಾತ್ರದ ತಾರೆ, ನಾಟ ಮೌಲ್ಯದಲ್ಲಿ ಬಂಗಾರದ ಬೆಲೆಯ ಬರಣಿಗೆ, ಹೊನ್ನೆ, ನೇರಲು, ಗೆಣಸು ಜಾತಿಯ ಐವತ್ತು ವರ್ಷ ದಾಟಿದ ಮರಗಳೂ ಇಲ್ಲಿದ್ದವು. ತಾಂತ್ರಿಕವಾಗಿ ನಾಲ್ಕು ಮರಗಳ ಕಡಿತಲೆಗೆ ಪರವಾನಗಿ ಪಡೆದು ಒಟ್ಟು ಏಳು ಮರಗಳನ್ನು ಉರುಳಿಸಲಾಗಿದೆ. ಸ್ಥಳೀಯ ಜನ ಕೂಡ ತಮ್ಮೂರಿನ ಪರಿಸರ ಹಾಳಾಗುತ್ತಿದ್ದರೂ ಈ ಕುರಿತು ಪ್ರತಿಭಟಿಸುವುದನ್ನು ಮರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪರಿದರ ಕಾರ್ಯಕರ್ತ ಜಯಪ್ರಕಾಶ್‌ ಗೋಳಿಕೊಪ್ಪ ಮಾತನಾಡಿ, ಮತ್ತೆ ಮತ್ತೆ ಇಂತಹ ಮರಗಳನ್ನು ಬೆಳೆಸುವುದು ಕಷ್ಟಸಾಧ್ಯ. ಅರಣ್ಯ ಇಲಾಖೆಯ ಅ ಧಿಕಾರಿಗಳು ಒಂದೆಡೆ ಅಮಾಯಕ ಅರಣ್ಯ ನಿವಾಸಿಗಳಿಗೆ ಕಾಡು ನಾಶ ಮಾಡುತ್ತಿದ್ದಾರೆ ಎಂದು ಕಿರುಕುಳ ಕೊಡುತ್ತಿದ್ದಾರೆ. ಇನ್ನೊಂದೆಡೆ ಅರಣ್ಯ ನಾಶಕ್ಕೆ ನೇರವಾಗಿ ಅವರು ಕುಮ್ಮಕ್ಕು ಕೊಡುತ್ತಿದ್ದಾರೆ. ತ್ಯಾಗರ್ತಿ ಭಾಗದ ಲ್ಯಾವಿಗೆರೆ ಮೊದಲಾದ ಭಾಗಗಳಲ್ಲಿ ಸಾರಾಸಗಟಾಗಿ ಮರಗಳನ್ನು ಕಡಿದು ಶುಂಠಿ ಬೇಸಾಯ ಮಾಡುವ ಕೆಲಸ ಕಳೆದ ಕೆಲವು ದಿನಗಳಿಂದ ಆಗುತ್ತಿದೆ ಎಂಬ ಮಾಹಿತಿಯಿದೆ. ನಾವು ಈಗಲೇ ಜಾಗೃತರಾಗದಿದ್ದರೆ ಮುಂದಿನ ಪೀಳಿಗೆಗೆ ಕಾಗದದ ಚೂರು ಎನ್ನಿಸಿಕೊಳ್ಳುವ ನೋಟುಗಳನ್ನು ಬಿಟ್ಟುಹೋಗಬಹುದೇ ವಿನಃ ಆರೋಗ್ಯ, ಮನಶ್ಯಾಂತಿ, ನೆಮ್ಮದಿಗಳನ್ನು ನಾಶ ಮಾಡಿ ಇಲ್ಲಿಯೇ ನರಕ ಸೃಷ್ಟಿ ಮಾಡುತ್ತಿದ್ದೇವೆ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.

ಈ ಮರಗಳು ಮನೆಯಿಂದ ಸಾಕಷ್ಟು ದೂರದಲ್ಲಿದ್ದವು. ಧರೆ ಕೂಡ ತುಂಬಾ ಎತ್ತರದ್ದಲ್ಲ. ಈ ಮರಗಳು ನಾಟಕ್ಕೆ ಬರುತ್ತವೆ ಎಂಬುದು ಮುಖ್ಯವಾಗಿತ್ತೇ ವಿನಃ ಅಪಾಯಕರವಲ್ಲ ಎಂಬ ವರದಿಯನ್ನು ಪ್ರಾಮಾಣಿಕವಾಗಿರುವ ಯಾವುದೇ ಅರಣ್ಯ ಅಧಿ ಕಾರಿ ನೀಡುತ್ತಿದ್ದರು. ಹೆಚ್ಚೆಂದರೆ ಕೆಲವು ಮರಗಳ ರೆಂಬೆಗಳನ್ನು ಟ್ರಿಮ್‌ ಮಾಡಿದ್ದರೆ ಈ ಮರಗಳು ಇನ್ನೂ ನೂರು ವರ್ಷ ತಂಪು ನೀಡುತ್ತಿದ್ದವು ಎಂದು ಖೇದ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next