Advertisement

ಮುಚ್ಚಿ ಹೋದ ಕೆರೆಗೆ ಮರುಜೀವ ನೀಡುವ ಕಾರ್ಯಕ್ಕೆ ಚಾಲನೆ

07:01 PM May 02, 2021 | Shreeraj Acharya |

ಶಿವಮೊಗ್ಗ: ಮುಚ್ಚಿಹೋಗಿದ್ದ ಕೆರೆಯನ್ನು ಮತ್ತೆ ಪುನರ್‌ಜೀವ ನೀಡುವ ಮಹತ್ತರ ಕೆಲಸವನ್ನು ಇಲ್ಲಿನ ಪರಿಸರಾಸಕ್ತರು ಆರಂಭಿಸಿದ್ದು, ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮಲ್ಲಿಗೇನಹಳ್ಳಿ ವಾಜಪೇಯಿ ಬಡಾವಣೆಯ ಸರ್ವೇ ನಂ.52ರ ಕ್ಯಾದಿಗೆಕಟ್ಟೆ ಕೆರೆ ಸಂಪೂರ್ಣ ಹೂಳು ತುಂಬಿಕೊಂಡಿದ್ದು, ಸುಮಾರು 8 ಎಕರೆ ವಿಸ್ತೀರ್ಣದ ಕೆರೆ ಇದಾಗಿದ್ದು, ಈಗ 2 ಎಕರೆ ಪ್ರದೇಶದಲ್ಲಿ ಕೆರೆ ಹೂಳೆತ್ತುವ ಕೆಲಸಕ್ಕೆ ಪರಿಸರಾಸಕ್ತರು ನಿರ್ಧರಿಸಿದ್ದು, ರಾಜ್ಯದಲ್ಲಿಯೇ ಒಂದು ಮಾದರಿ ಕೆರೆಯನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದ್ದಾರೆ.

Advertisement

ಕೆರೆಯ ಹೂಳು ಎತ್ತಿ ನೀರು ಸಂಗ್ರಹಣೆಗೆ ಅವಕಾಶ ನೀಡಿ ಕೆರೆಯ ಸುತ್ತಮುತ್ತ ಗಿಡ ಮರಗಳನ್ನು ಬೆಳೆಸುವ ಉದ್ದೇಶ ಹೊಂದಿದ್ದು, ಸಾರ್ವಜನಿಕರ ವಾಯು ವಿಹಾರಕ್ಕೂ ಕೂಡ ಅನುಕೂಲಕರ ವಾತಾವರಣವನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಕೆಲವು ಪರಿಸರ ತಜ್ಞರ ಜೊತೆ ಸೇರಿಕೊಂಡು ನೀಲನಕ್ಷೆ ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ವಾಜಪೇಯಿ ಬಡಾವಣೆಯಲ್ಲಿ ನಿರ್ಮಾಣವಾಗುವ ಎಲ್ಲಾ ಮನೆಗಳ ಮೇಲ್ಚಾವಣಿಯ ಮಳೆ ನೀರು ಪೈಪುಗಳ ಮೂಲಕ ನೇರವಾಗಿ ಈ ಕೆರೆಯನ್ನು ಸೇರುವಂತೆ ಮಾಡಲಾಗುವ ಮಳೆ ಕೊಯ್ಲು ಯೋಜನೆ ಕೂಡ ಇದರ ಭಾಗವಾಗಿದೆ ಎಂದು ಪರಿಸರಾಸಕ್ತರ ತಂಡ ತಿಳಿಸಿದೆ.

ಯೋಜನೆಯ ತಜ್ಞ ಯೇಸು ಪ್ರಕಾಶ್‌ ಮಾತನಾಡಿ, ಕೆರೆಗೆ ಜೀವಕೊಡುವುದು ಮಾತ್ರವಲ್ಲ. ದೇಶದಲ್ಲಿಯೇ ಮಾದರಿ ಕೆರೆಯನ್ನಾಗಿ ರೂಪಿಸುವುದು ಇದರ ಉದ್ದೇಶ. ಈಗಾಗಲೇ ನಾವು ಸುಮಾರು 6 ಕೆರೆಗಳನ್ನು ಈ ರೀತಿ ಜೀರ್ಣೋದ್ದಾರ ಮಾಡಿದ್ದೇವೆ ಎಂದರು. ಪರಿಸರಾಸಕ್ತರ ತಂಡದ ಸದಸ್ಯ ಸತೀಶ್‌ ಮಾತನಾಡಿ, ಕೆರೆಯ ಸುತ್ತಮುತ್ತ ಸ್ಥಳೀಯ ಸಸ್ಯ ಪ್ರಭೇದಗಳನ್ನೇ ಬೆಳೆಸಲಾಗುವುದು. ಅತ್ಯಂತ ಕಡಿಮೆ ಜಾಗದಲ್ಲಿ ಹೆಚ್ಚು ಸಸಿ ಬೆಳೆಸುವುದು ಮತ್ತು ಪರಿಸರವನ್ನು ಉತ್ತಮವಾಗಿಸುವ ಸಸ್ಯಗಳನ್ನು ಆಯ್ಕೆ ಮಾಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದರು. ಪ್ರೊ| ಬಿ.ಎಂ.ಕುಮಾರಸ್ವಾಮಿ, ಪ್ರೊ| ಚಂದ್ರಶೇಖರ್‌, ಕಾಟನ್‌ ಜಗದೀಶ್‌, ಶ್ರೀಧರ್‌, ಬಾಲಕೃಷ್ಣ ನಾಯ್ಡು, ಸತೀಶ್‌ ಕುಮಾರ್‌, ತ್ಯಾಗರಾಜ್‌, ಪ್ರಕಾಶ್‌, ಮೋಹನ್‌, ಉಮೇಶ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next