Advertisement

ಶಿವಾಜಿ ಮಹಾರಾಜರ ತತ್ವಾದರ್ಶ ಪಾಲಿಸಿ

11:01 AM Feb 20, 2018 | |

ಜೇವರ್ಗಿ: ಇಂದಿನ ಯುವಪೀಳಿಗೆ ಛತ್ರಪತಿ ಶಿವಾಜಿ ಮಹಾರಾಜರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಪಂ ಆರೋಗ್ಯ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕಿ ಚನ್ನಮಲ್ಲಯ್ಯ ಹಿರೇಮಠ ಹೇಳಿದರು.

Advertisement

ಪಟ್ಟಣದ ಮಿನಿವಿಧಾನಸೌಧದಲ್ಲಿ ಸೋಮವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿವಾಜಿ ಮಹಾರಾಜರು ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಮರಾಠ ಸಮಾಜದ ಬಾಂಧವರು ಶಿಕ್ಷಣ ಪಡೆಯುವುದರ ಮೂಲಕ ಶೈಕ್ಷಣಿಕ, ರಾಜಕೀಯ ಸ್ಥಾನಮಾನ ಗಳಿಸಬೇಕು ಎಂದು ಹೇಳಿದರು.

ಇದಕ್ಕೂ ಮುನ್ನ ಪಟ್ಟಣದ ಹಳೆ ತಹಶೀಲ್ದಾರ ಕಚೇರಿಯಿಂದ ಮಿನಿ ವಿಧಾನಸೌಧದವರೆಗೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಯಶವಂತ್ರಾಯ ಮಾಲಿಪಾಟೀಲ ಉಪನ್ಯಾಸ ನೀಡಿದರು.

ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಅಬ್ದುಲ್‌ ರಜಾಕ್‌ ಮನಿಯಾರ್‌, ತಾಪಂ ಇಒ ಪ್ರಭು ಮಾನೆ, ತಹಶೀಲ್ದಾರ ಬಸಲಿಂಗಪ್ಪ
ನಾಯ್ಕೋಡಿ, ಸಮಾಜದ ಮುಖಂಡರಾದ ಮಹಾದೇವಪ್ಪ ಇಜೇರಿ, ಸುಧೀಂದ್ರ ಇಜೇರಿ, ವೆಂಕೋಬರಾವ ವಾಗಣಗೇರಿ, ಗಣೇಶ ಮಹೇಂದ್ರಕರ್‌, ಈಶ್ವರ ಸೂರ್ಯವಂಶಿ ಮೋರಟಗಿ, ನರೇಶ ಚಂದುಕರ್‌, ಮಾನೋಜಿ ಯಲಗೋಡ, ಸಚೀನ ಸಾವಜಿ, ಸಂತೋಷ ಸಾವುಜಿ, ಮೈಲಾರಿ ಬಣಮಿ ಇದ್ದರು. ತಹಶೀಲ್ದಾರ ಬಸಲಿಂಗಪ್ಪ ನಾಯ್ಕೋಡಿ ಸ್ವಾಗತಿಸಿದರು. ಶಿಕ್ಷಕ ಅಮೃತ ಮಾಲಿಪಾಟೀಲ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next