Advertisement

ಹಾಡಹಗಲೇ ಗುಂಡಿನ ದಾಳಿ: ಶಿವಸೇನೆ ಮುಖಂಡ ರಾಹುಲ್‌ ಶೆಟ್ಟಿ ಹತ್ಯೆ

07:54 AM Oct 27, 2020 | keerthan |

ಪುಣೆ: ಶಿವಸೇನೆಯ ಸ್ಥಳೀಯ ಘಟಕದ ಮಾಜಿ ಅಧ್ಯಕ್ಷ ರಾಹುಲ್‌ ಶೆಟ್ಟಿ (43) ಅವರನ್ನು ಲೋನಾವಾಲದಲ್ಲಿ ಸೋಮವಾರ ಹಾಡಹಗಲೇ ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ.

Advertisement

ಅವರ ಪತ್ನಿ, ಮಾಜಿ ಕಾರ್ಪೊರೇಟರ್‌ ಸೌಮ್ಯಾ ನೀಡಿರುವ ದೂರನ್ನು ಆಧರಿಸಿ ಪೊಲೀಸರು ಆರೋಪಿಗಳಾದ ಸೂರಜ್‌ ಅಗರ್ವಾಲ್‌ ಮತ್ತು ದೀಪಾಲಿ ಭಿಲಾರೆ ಎಂಬಿಬ್ಬರನ್ನು ಬಂಧಿಸಿದ್ದಾರೆ. ಇನ್ನೂ ಒಬ್ಬ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಬೆಳಗ್ಗೆ 10 ಗಂಟೆ ಸುಮಾರಿಗೆ ರಾಹುಲ್‌ ಲೋನಾವಾಲದ ಜಯಚಂದ್‌ ಚೌಕ್‌ನಲ್ಲಿರುವ ತನ್ನ ಚಹಾ ಅಂಗಡಿಯ ಹೊರಗಿದ್ದಾಗ ಈ ಘಟನೆ ಸಂಭವಿಸಿದೆ.

ಇಬ್ಬರು ದುಷ್ಕರ್ಮಿಗಳಲ್ಲಿ ಒಬ್ಬ ರಾಹುಲ್‌ ಶೆಟ್ಟಿ ಮೇಲೆ ಮೂರು ಸುತ್ತು ಗುಂಡು ಹಾರಿಸಿದನು. ಅನಂತರ ಇಬ್ಬರೂ ಶೆಟ್ಟಿ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತ ಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಎಸ್‌ಪಿ ಅಭಿನವ ದೇಶ್‌ಮುಖ್‌ ತಿಳಿಸಿದ್ದಾರೆ.

ರಾಹುಲ್‌ ಶೆಟ್ಟಿ ಅವರೂ ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದು, ಕೆಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದರು. ವೈಷಮ್ಯದಿಂದ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next