Advertisement

Shiv Sena (UBT) ನಮ್ಮಲ್ಲೇ ನಾಯಕರಿದ್ದಾರೆ, ಬಿಜೆಪಿ ಮುಖಂಡರ ಅಗತ್ಯ ಇಲ್ಲ: ಪ್ರಿಯಾಂಕಾ

01:30 AM Sep 16, 2024 | Team Udayavani |

ಮುಂಬಯಿ: ದೇಶವನ್ನು ಸಮರ್ಥವಾಗಿ ಮುನ್ನಡೆಸ ಬಲ್ಲ ಹಲವು ನಾಯಕರು ವಿಪಕ್ಷ ಒಕ್ಕೂಟದಲ್ಲೇ ಇದ್ದಾರೆ, ನಮಗೆ ಬಿಜೆಪಿ ನಾಯಕರನ್ನು ಸಾಲ ಪಡೆ ಯುವ ಅಗತ್ಯವಿಲ್ಲ ಎಂದು ಶಿವಸೇನೆ ಉದ್ಧವ್‌ ಬಣದ ನಾಯಕಿ ಪ್ರಿಯಾಂಕಾ ಚತು ರ್ವೇದಿ ಹೇಳಿದ್ದಾರೆ.

Advertisement

ಪಿಎಂ ಆಫ‌ರ್‌ ಇತ್ತು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿಕೆ ನೀಡಿದ್ದಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿ, ಬಿಜೆಪಿ ನಾಯಕ ನಿತಿನ್‌ ಗಡ್ಕರಿ ಪ್ರಧಾನಿ ಯಾಗಬೇಕು ಎಂಬ ತಮ್ಮ ಮನೋಭಿಲಾಷೆಯನ್ನು ವಿಪಕ್ಷಗಳ ಹೆಸರನ್ನು ಬಳಸಿಕೊಂಡು ಹೊರಹಾಕು ತ್ತಿದ್ದಾರೆ. ನೀವು ಚೆನ್ನಾಗಿ ದಾಳ ಉರುಳಿಸಿದ್ದೀರಿ ನಿತಿನ್‌ ಜೀ ಎಂದೂ ಚತುರ್ವೇದಿ ವ್ಯಂಗ್ಯವಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next