Advertisement

ಪ್ರಧಾನಿಗೆ ಭದ್ರತಾ ಬೆದರಿಕೆ ಇದೆ ಎನ್ನುವುದು ಕೇವಲ ಬೊಗಳೆ: ಶಿವಸೇನೆ

07:15 PM Sep 03, 2018 | udayavani editorial |

ಮುಂಬಯಿ : ”ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ಬೆದರಿಕೆ ಇದೆ ಎಂಬುದು ಕೇವಲ ಒಂದು ಸಂಚಿನ ವ್ಯಾಖ್ಯಾನವಾಗಿದೆ. ಮಾನವ ಹಕ್ಕು ಮತ್ತು ಸಮಾಜ ಕಾರ್ಯಕರ್ತರ ಬಂಧನದ ಬಗ್ಗೆ ಮಹಾರಾಷ್ಟ್ರ ಪೊಲೀಸರು ಹೇಳಿಕೊಂಡಿರುವುದೆಲ್ಲ ಬೊಗಳೆ ” ಎಂದು ಶಿವಸೇನೆ ಹೇಳಿದೆ.

Advertisement

”ಪ್ರಜಾಸತ್ತೆಯಲ್ಲಿ ಯಾವುದೇ ಒಂದು ಸರಕಾರವನ್ನು ಬೀಳಿಸುವುದು ಜನರೇ ಹೊರತು ಮಾವೋವಾದಿಗಳು ಅಥವಾ ನಕ್ಸಲರು ಅಲ್ಲ” ಎಂದು ಶಿವಸೇನೆ, ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರಕಾರಕ್ಕೆ ಟಾಂಗ್‌ ನೀಡಿದೆ. 

ತನ್ನ ಸಾಮನಾ ಮುಖವಾಣಿಯಲ್ಲಿ ಶಿವಸೇನೆ, “ತಥಾಕಥಿತ ಮಾವೋವಾದಿಗಳು ಕೇಂದ್ರದಲ್ಲಿನ ಹಾಲಿ ಸರಕಾರವನ್ನು ಬೀಳಿಸಲು ಮುಂದಾಗಿದ್ದಾರೆ’ ಎಂದು ಹೇಳುವುದನ್ನು BJP ನಿಲ್ಲಿಸಬೇಕು; ಏಕೆಂದರೆ ಇದೊಂದು ಮೂರ್ಖ ಹೇಳಿಕೆಯಾಗಿದೆ; ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರಕಾರದವನ್ನು ಬೀಳಿಸಿದ್ದು ಜನರೇ ಹೊರತು ಮಾವೋವಾದಿಗಳು ಅಥವಾ ನಕ್ಸಲೈಟ್‌ಗಳು ಅಲ್ಲ; ದೇಶದಲ್ಲಿ ಜನರು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಿಂದಲೇ ಸರಕಾರವನ್ನು ಬದಲಾಯಿಸುತ್ತಾ ಬಂದಿದ್ದಾರೆ ಹೊರತು ಅನ್ಯರಲ್ಲ ಎಂದು ಶಿವಸೇನೆ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next