Advertisement

ಉದ್ಧವ್‌ ಠಾಕ್ರೆ,18 ಶಿವಸೇನೆ ಸಂಸದರಿಂದ ಅಯೋಧ್ಯೆಯಲ್ಲಿ ವಿಶೇಷ ಪೂಜೆ

09:15 AM Jun 18, 2019 | Vishnu Das |

ಅಯೋಧ್ಯೆ: ಶಿವಸೇನಾ ವರಿಷ್ಠ ಉದ್ಧವ್‌ ಠಾಕ್ರೆ ,ಶಿವಸೇನೆಯ 18 ಲೋಕಸಭಾ ಸದಸ್ಯರು ಸೇರಿದಂತೆ ಪ್ರಮುಖ ನಾಯಕರು ಭಾನುವಾರ ಅಯೋಧ್ಯೆಗೆ ಭೇಟಿ ನೀಡಿ ರಾಮಲಲ್ಲಾನಿಗೆ ವಿಶೇಷ ಪೂಜೆ ಸಲ್ಲಿಸಿದರು.

Advertisement

ಉದ್ಧವ್‌ ಅವರೊಂದಿಗೆ ಪುತ್ರ ಆದಿತ್ಯ ಠಾಕ್ರೆ ಅವರು ಆಗಮಿಸಿದ್ದರು.

ಮುಂಬಯಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಉದ್ಧವ್‌ ಠಾಕ್ರೆ ಅವರನ್ನು ಕೇಂದ್ರ ಸಚಿವ ಅರವಿಂದ್‌ ಸಾವಂತ್‌ ಮತ್ತು ಶಿವಸೇನಾ ವಕ್ತಾರ ಸಂಜಯ್‌ ರಾವುತ್‌ ಅವರು ಸ್ವಾಗತಿತಿಸಿದರು.

ರಾಮ ಮಂದಿರನಿರ್ಮಾಣಕ್ಕೆ ನಿರಂತರವಾಗಿ ಒತ್ತಾಯಿಸುತ್ತಲೆ ಬಂದಿರುವ ಶಿವಸೇನೆ ಕೇಂದ್ರ ಸರ್ಕಾರಕ್ಕೆ ಶೀಘ್ರ ಮಂದಿರ ನಿರ್ಮಾಣದ ಕುರಿತು ಘೋಷಿಸಲು ಒತ್ತಾಯಿಸುವ ಸಾಧ್ಯತೆಗಳಿವೆ.

ಪ್ರಸಕ್ತವರ್ಷ ಮಹಾರಾಷ್ಟ್ರದಲ್ಲಿವಿಧಾನಸಭೆ ಚುನಾವಣೆ ನಡೆಯಲಿದ್ದು ರಾಮ ಮಂದಿರದ ವಿಚಾರವೂ ಪ್ರಮುಖವಾಗುವ ಸಾಧ್ಯತೆಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next