Advertisement

ಶಿರ್ವ : ಭತ್ತದ ನಾಟಿ ಕಾರ್ಯ ಆರಂಭ

12:01 AM Jun 16, 2019 | sudhir |

ಶಿರ್ವ: ಮುಂಗಾರು ಮಳೆಯ ಆರಂಭದೊಂದಿಗೆ ಶಿರ್ವ ನ್ಯಾರ್ಮ ಪರಿಸರದಲ್ಲಿ ಭತ್ತದ ಗದ್ದೆಯ ಉಳುಮೆ ಕಾರ್ಯ ಚುರುಕುಗೊಂಡಿದ್ದು ಗುರುವಾರದಿಂದ ನಾಟಿ ಕಾರ್ಯ ಪ್ರಾರಂಭಗೊಂಡಿದೆ.

Advertisement

ಶಿರ್ವ ನ್ಯಾರ್ಮ ಮಹಾಲಸಾ ನಾರಾಯಣೀ ದೇವಸ್ಥಾನದ ಗದ್ದೆಯಲ್ಲಿ ಸಮಾಜ ಸೇವಕ ಅನಂತ್ರಾಯ ಶೆಣೈ ಅವರ ನೇತೃತ್ವದಲ್ಲಿ ಸುಮಾರು 4 ಎಕರೆ ಪ್ರದೇಶದಲ್ಲಿ ನಾಟಿ ಕಾರ್ಯ ಆರಂಭಗೊಂಡಿದ್ದು ಸುಮಾರು 18 ಮಹಿಳೆಯರು ಉತ್ಸಾಹದಿಂದ ನಾಟಿ ಮಾಡುತ್ತಿದ್ದಾರೆ.

ಜಿಲ್ಲೆಯ ಹೆಚ್ಚಿನೆಡೆ ಕೃಷಿ ಭೂಮಿ ಹಡಿಲು ಬಿದ್ದಿದ್ದರೂ ಸಾಂಪ್ರದಾಯಿಕವಾಗಿ ಸಾವಯವ ಕೃಷಿ ಪದ್ಧತಿಯ ಮೂಲಕ ನೇಜಿ ಸಿದ್ಧಪಡಿಸಿ ವರ್ಷಂಪ್ರತಿ ಭತ್ತದ ಬೇಸಾಯ ಮಾಡುತ್ತಿದ್ದು ಸಮಾಜಸೇವೆಯೊಂದಿಗೆ ಮಾದರಿ ಕೃಷಿಕರಾಗಿ ಭತ್ತದ ಬೆಳೆ ಬೆಳೆಯುತ್ತಿದ್ದಾರೆ. ಕಳೆದ ಮೇ ತಿಂಗಳ 14 ರಂದು ಭತ್ತದ ಬೀಜ ಬಿತ್ತನೆ ಮಾಡಿದ್ದು ಸರಿಯಾಗಿ ಒಂದು ತಿಂಗಳ ನಂತರ ನಾಟಿ ಕಾರ್ಯ ಮಾಡುತ್ತಿದ್ದಾರೆ.

ಆ ಮೂಲಕ‌ ಸಕಾಲದಲ್ಲಿ ಭತ್ತದ ಕೃಷಿ ಮಾಡಿ ಶ್ರಾವಣ ಮಾಸದಲ್ಲಿ ಪರಿಸರದ ದೇವಸ್ಥಾನ, ಚರ್ಚುಗಳಿಗೆ ಕದಿರುಕಟ್ಟಲು ತೆನೆ ನೀಡಿ ಸಹಕರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next