Advertisement

Shirva: ಭದ್ರಾವತಿ ಮೂಲದ ವೃದ್ಧೆ ನಾಪತ್ತೆ

06:47 PM May 20, 2024 | Team Udayavani |

ಶಿರ್ವ: ಪಡುಬೆಳ್ಳೆ ಪಾಂಬೂರು ಮಾನಸ ಶಾಲೆಯ ಬಳಿ ವಾಸವಾಗಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಭೀಮಣಿ ಬಾಯಿ ಆಲಿಯಾಸ್‌ ಲಕ್ಷ್ಮೀ (67) ಮೇ. 18 ರಿಂದ ನಾಪತ್ತೆಯಾಗಿರುವ ಬಗ್ಗೆ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಭೀಮಣಿ ಬಾಯಿ ಮೇ. 5 ರಂದು ತನ್ನ ಸ್ವಂತ ಊರಾದ ಶಿವಮೊಗ್ಗಕ್ಕೆ ಒಬ್ಬರೇ ತೆರಳಿ ಪುತ್ರನ ಮನೆಯಲ್ಲಿ ವಾಸವಾಗಿದ್ದರು. ಮೇ.18ರಂದು ಬೆಳಗ್ಗೆ ಈಕೆಯನ್ನು ಪುತ್ರ ಭದ್ರಾವತಿಯ ಗೊಂದಿ ಕೈಮರ ಬಸ್‌ ನಿಲ್ದಾಣದಿಂದ ಬಸ್‌ ಹತ್ತಿಸಿ ಉಡುಪಿಗೆ ಕಳುಹಿಸಿ ಕೊಟ್ಟಿದ್ದರು. ಮಧ್ಯಾಹ್ನ 1-55ಕ್ಕೆ ಬಸ್‌ ಉಡುಪಿಗೆ ತಲುಪಿದ್ದು, ಭೀಮಣಿ ಬಾಯಿ ಪಾಂಬೂರಿನ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಕಾಣೆಯಾದ ಬಗ್ಗೆ ಸಂಬಂಧಿಕರ ಮನೆ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದ್ದು,ಪತ್ತೆಯಾಗಿರುವುದಿಲ್ಲ ಎಂದು ಪುತ್ರ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next