Advertisement

Shirva; ಕತ್ತಿಯಿಂದ ಕುತ್ತಿಗೆ ಕುಯ್ದುಕೊಂಡು ವ್ಯಕ್ತಿ ಆತ್ಮಹತ್ಯೆ

12:31 AM Mar 24, 2024 | Team Udayavani |

ಶಿರ್ವ: ಮಾನಸಿಕ ಖಿನ್ನತೆ ಮತ್ತು ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಕತ್ತಿಯಿಂದ ಕುತ್ತಿಗೆಯನ್ನು ಕುಯ್ದುಕೊಂಡು ಆತ್ಮಹತ್ಯೆಗೈದ ಘಟನೆ ಕುರ್ಕಾಲು ಗ್ರಾಮದ ಸುಭಾಸ್‌ನಗರ ಕಡುಮಣ್ಣು ಹೌಸ್‌ ಎಂಬಲ್ಲಿ ನಡೆದಿದೆ.

Advertisement

ಕುರ್ಕಾಲು ಸುಭಾಸ್‌ನಗರ ನಿವಾಸಿ ನಾರಾಯಣ(64) ಆತ್ಮಹತ್ಯೆ ಮಾಡಿಕೊಂಡವರು. ಮನೆಯಲ್ಲಿ ಒಬ್ಬಂಟಿಯಾಗಿದ್ದ ಅವರು ನ್ಯುಮೋನಿಯಾ ಕಾಯಿಲೆಯಿಂದ ಉಂಟಾದ ಉಸಿರಾಟದ ತೊಂದರೆಯಿಂದ ಜೀವನದಲ್ಲಿ ಜುಗುಪ್ಸೆಗೊಂಡು ಮಾ. 22ರ ಮಧ್ಯಾಹ್ನ ಕತ್ತಿಯಿಂದ ಕುತ್ತಿಗೆಯನ್ನು ಕುಯ್ದುಕೊಂಡಿದ್ದಾರೆ.

ಅಸ್ವಸ್ಥರಾಗಿ ಬಿದ್ದಿದ್ದ ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next