Advertisement

ಉಕ್ಕುತ್ತಿದೆ ವರದೆ: ಶಿರಸಿ- ಬನವಾಸಿ ಸಂಪರ್ಕ ಬಂದ್‌ ಆತಂಕ

03:37 PM Jul 16, 2022 | Team Udayavani |

ಶಿರಸಿ: ತಾಲೂಕಿನಲ್ಲಿ ನಿರಂತವಾಗಿ ಮಳೆ ಸುರಿಯುತ್ತಿರುವ ಪರಿಣಾಮ  ಐತಿಹಾಸಿಕ ಬನವಾಸಿ ಗೆ ತೆರಳುವ ಗುಡ್ನಾಪುರ ಬಳಿ ರಸ್ತೆ‌ ಮೇಲೆ ನೀರು ಹರಿಯುತ್ತಿದೆ. ಇನ್ನೊಂದೆಡೆ ವರದಾ ನದಿ ಪ್ರವಾಹ ಕೂಡ ಏರುತ್ತಿದೆ.

Advertisement

ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ, ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಮೊಗವಳ್ಳಿ ಬನವಾಸಿ ರಸ್ತೆ ‌ಮೇಲಿನಲ್ಲೂ ನೀರು ಹರಿದಿದ್ದು ಅಲ್ಲಿನ ಸಂಚಾರ‌ವನ್ನು ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಪತ್ತೆಯಾಯ್ತು ಅಪರೂಪದ ಬಿಳಿ ನಾಗರಹಾವು

ರಸ್ತೆ ಮೇಲೆ‌ ನೀರು ಹರಿಯುವಾಗ ಎಚ್ಚರಿಕೆ ತಪ್ಪಿ ವಾಹನ ಚಲಾಯಿಸಬಾರದು ಎಂದು ಸಿಪಿಐ ರಾಮಚಂದ್ರ ನಾಯಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಗುಡ್ನಾಪುರ ಕೆರೆ ತುಂಬಿದ ಪರಿಣಾಮ‌ ನೀರು ಹರಿದಿದ್ದು, ನೀರಿನ ಹರಿವು ಹೆಚ್ಚಿದರೆ ಸಂಚಾರ ಸಂಪೂರ್ಣ ಸ್ಥಗಿತ ಆಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next