Advertisement

ಶಿರಸಿ: ತಪ್ಪಾಗಿ ತಿಳಿದು ನಗರಸಭೆ ಸದಸ್ಯೆ ಮೇಲೆ ಹಲ್ಲೆ, ಜೀವ ಬೆದರಿಕೆ

08:18 PM Feb 13, 2022 | Team Udayavani |

ಶಿರಸಿ: ಶೆಡ್ ನಿರ್ಮಾಣಮಾಡಿರುವ ಬಗ್ಗೆ ನಗರಸಭೆ ಸದಸ್ಯೆ ಜಿಲ್ಲಾಧಿಕಾರಿಗೆ ದೂರು ನೀಡಿರಬಹುದು ಎಂದು ತಪ್ಪಾಗಿ ತಿಳಿದ ವ್ಯಕ್ತಿಯೋರ್ವ ನಗರಸಭೆ ಸದಸ್ಯೆ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ರವಿವಾರ ನಗರದ ವೀರಭದ್ರಗಲ್ಲಿಯಲ್ಲಿ ನಡೆದಿದೆ.

Advertisement

ವಿನಾಯಕ ಶೆಟ್ಟಿ ಹಲ್ಲೆ ನಡೆಸಿದ ಆರೋಪಿಯಾಗಿದ್ದು, ಶೆಡ್ ನಿರ್ಮಿಸುತ್ತಿರುವ ಜಾಗದ ಎದುರೇ ನಗರಸಭೆ ಸದಸ್ಯೆ ದೀಪಾ ಮಹಾಲಿಂಗಣ್ಣನವರ್ ಅವರ ಮನೆ ಇದೆ. ಶೆಡ್ ಕುರಿತಂತೆ ಯಾರೋ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ಇದರಿಂದ ಕೋಪಗೊಂಡ ವಿನಾಯಕ, ನಗರಸಭೆ ಸದಸ್ಯೆಯ‌ ಮನೆಗೆ ನುಗ್ಗಿ, ದೂಡಿ ಹಾಕಿ ಹಲ್ಲೆ ನಡೆಸಿದ್ದಾನೆ.

ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next