Advertisement

ಆತಂಕದಲ್ಲೇ ಶಿರಾಡಿ ಸಂಚಾರ ಪ್ರಾರಂಭ

11:01 PM Aug 11, 2019 | Team Udayavani |

ನೆಲ್ಯಾಡಿ: ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಹಾನಿಗೀಡಾಗಿದ್ದ ಶಿರಾಡಿ ಘಾಟಿ ರಸ್ತೆಯಲ್ಲಿ ಆತಂಕದಿಂದಲೇ ವಾಹನ ಸಂಚಾರ ಪ್ರಾರಂಭವಾಗಿದೆ. ಭಾನುವಾರ ಮಳೆ ತುಸು ಕಡಿಮೆಯಾದ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರಕ್ಕೂ ಅನುಮತಿ ನೀಡಲಾಗಿ ತ್ತಾದರೂ ಸಂಜೆಯವರೆಗೂ ವಾಹನಗಳು ಆತಂಕದಿಂದಲೇ ಸಂಚರಿಸಿದವು.

Advertisement

ಶನಿವಾರ ತಡರಾತ್ರಿ ಲಾರಿಯೊಂದು ಶಿರಾಡಿ ಗಡಿಯ ಮೇಲ್ಭಾಗದಲ್ಲಿ ನಿಯಂತ್ರಣ ಕಳೆದುಕೊಂಡು ಚರಂಡಿಗೆ ಬಿದ್ದ ಪರಿಣಾಮ ಸಂಚಾರಕ್ಕೆ ಸ್ವಲ್ಪ ಕಾಲ ತಡೆಯುಂಟಾಗಿತ್ತು. ಬೆಳಗಿನ ವೇಳೆ ಲಾರಿಯನ್ನು ತೆರವುಗೊಳಿಸಿದ ಬಳಿಕ ಸಂಚಾರ ಸುಗಮವಾಯಿತು. ಭಾನುವಾರ ಬೆಳಗ್ಗೆ 10 ಗಂಟೆಯ ಬಳಿಕ ಹೆದ್ದಾರಿ  ಬದಿ ನಿಲ್ಲಿಸಲಾಗಿದ್ದ ಘನ ವಾಹನಗಳಿಗೂ ಸಂಜೆ 6 ಗಂಟೆಯ ವರೆಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

ರಾತ್ರಿ ಗುಡ್ಡ ಕುಸಿತದ ಭೀತಿಯಿರುವ ಕಾರಣ ನಿರ್ಬಂಧ ಹೇರಲಾಗಿತ್ತು. ಸೋಮವಾರ ಪರಿಸ್ಥಿತಿ ನೋಡಿಕೊಂಡು ಅಪಾಯವಿಲ್ಲದಿದ್ದರೆ ಸಂಚಾರ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ. ಈ ಮಧ್ಯೆ, ಶನಿವಾರ ರಾತ್ರಿಯಿಂದಲೇ ಘನ ವಾಹನಗಳನ್ನು ಗುಂಡ್ಯ ಪ್ರದೇಶದಲ್ಲಿ ಅಡ್ಡಾದಿಡ್ಡಿ ನಿಲುಗಡೆ ಮಾಡಿದ್ದರಿಂದ ಗುಂಡ್ಯ ಜಂಕ್ಷನ್‌ ಇಡೀ ಬ್ಲಾಕ್‌ ಆಗಿ ವಾಹನ ಸವಾರರು ಪರದಾಡುವಂತಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next