Advertisement

ಭಾರೀ ಮಳೆಯಾಗುತ್ತಿರುವ ಕಾರಣ ಶಿರಾಡಿ ಘಾಟ್ ಬಂದ್

01:07 PM Jul 23, 2021 | Team Udayavani |

ಚಿಕ್ಕಮಗಳೂರು : ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ರಸ್ತೆಯ ಸಂಚಾರವನ್ನು ಬಂದ್ ಮಾಡಲಾಗಿದೆ. ರಾಜ್ಯದಲ್ಲಿ ಕಳೆದ ದಿನಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಹಲವು ಭೂಕುಸಿದ ಉಂಟಾಗಿದೆ.

Advertisement

ಇನ್ನು ಚಾರ್ಮಡಿ ಘಾಟ್ ನಲ್ಲಿ ಕೂಡ ಮಳೆಯಿಂದ ಮಣ್ಣು ಕುಸಿತವಾಗುತ್ತಿದ್ದು, ವಾಹನ ಸವಾರರು ಆತಂಕದಲ್ಲಿ ಸಂಚಾರ ಮಾಡುವಂತಾಗಿದೆ.

ಇನ್ನು ಕುಂದಾನಗರಿ ಬೆಳಗಾವಿಯಲ್ಲೂ ಕೂಡ ವರುಣಾರ್ಭಟ ಜೋರಾಗಿದ್ದು, ಪ್ರವಾಹ ಭೀತಿ ಶುರುವಾಗಿದೆ. ಮನೆಗಳ ಚಾವಣಿ ಕುಸಿತವಾಗುತ್ತಿದ್ದು, ಜನರು ಜೀವ ಭಯದಿಂದ ಬದುಕುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next