Advertisement

ತಪ್ಪಿದ ಮೇಯರ್ ಸ್ಥಾನ: ಕಣ್ಣೀರು ಹಾಕಿದ ಬಿಜೆಪಿ ಸ್ಥಾನ ಆಕಾಂಕ್ಷಿ ಅನಿತಾ ರವಿಶಂಕರ್

08:31 AM Jan 30, 2020 | keerthan |

ಶಿವಮೊಗ್ಗ: ಇಲ್ಲಿನ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಬಿಜೆಪಿಯಿಂದ ಸುವರ್ಣಾ ಶಂಕರ್ ಗೆ ಅವಕಾಶ ನೀಡಿದೆ. ಹೀಗಾಗಿ ಅವಕಾಶ ಕೈತಪ್ಪಿದ ಬೇಸರದಲ್ಲಿ ಆಕಾಂಕ್ಷಿಯಾಗಿದ್ದ ಬಿಜೆಪಿಯ ಅನಿತಾ ರವಿಶಂಕರ್ ಕಣ್ಣೀರು ಹಾಕಿದ ಘಟನೆ ನಡೆಯಿತು.

Advertisement

ಈ ಹಿಂದೆ ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಅನಿತಾ ರವಿಶಂಕರ್ ಅವರ ಹೆಸರು ಬಹುತೇಕ ಅಂತಿಮ ಎನ್ನಲಾಗಿತ್ತು. ಆದರೆ ಇಂದು ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಪಕ್ಷದ ಪ್ರಮುಖರು ಮೇಯರ್ ಸ್ಥಾನಕ್ಕೆ ಸುವರ್ಣಾ ಶಂಕರ್‌ ಹೆಸರು ಅಂತಿಮಗೊಳಿಸಿದ್ದಾರೆ.

ಇದರಿಂದಾಗಿ ಬೇಸರಗೊಂಡ ಅನಿತಾ ರವಿಶಂಕರ್ ಬಿಜೆಪಿ ಕಚೇರಿಯಿಂದ ಕಣ್ಣೀರು ಹಾಕುತ್ತಾ ಹೊರನಡೆದರು.

ಬಿಜೆಪಿಯಲ್ಲಿ ಗೊಂದಲ ಇದ್ದ ಹಿನ್ನೆಲೆಯಲ್ಲಿ ಮೈಸೂರು ಪ್ರವಾಸಕ್ಕೆ ತೆರಳಿದ ಪಾಲಿಕೆ ಬಿಜೆಪಿ ಸದಸ್ಯರು ಮೇಯರ್ ಸ್ಥಾನದ ಅಭ್ಯರ್ಥಿ ಆಯ್ಕೆ ಸಮಸ್ಯೆ ಬಗೆಹರಿದ ಹಿನ್ನೆಲೆಯಲ್ಲಿ ಈಶ್ವರಪ್ಪ ಭೇಟಿಗಾಗಿ ಬಿಜೆಪಿ ಕಚೇರಿಗೆ ಬಸ್ ನಲ್ಲಿ ಆಗಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next