Advertisement

ಟ್ರಾಕ್ಟರ್ ಜಪ್ತಿಗೆ ಮುಂದಾದ ಬ್ಯಾಂಕ್ ಅಧಿಕಾರಿಗಳನ್ನು ತಡೆದು ವಾಪಾಸು ಕಳುಹಿಸಿದ ರೈತರು

09:42 AM Jan 21, 2020 | keerthan |

ಶಿವಮೊಗ್ಗ: ಸಾಲ ಮರುಪಾವತಿ ಮಾಡದ ರೈತರ ಟ್ಯಾಕ್ಟರ್ ಜಪ್ತಿ ಮಾಡಲು ಬಂದ ಬ್ಯಾಂಕ್ ಅಧಿಕಾರಿಗಳನ್ನು ರೈತರು ವಾಪಾಸ್ ಕಳುಹಿಸಿದ ಘಟನೆ ಅಯನೂರಿನ ಮೈಸವಳ್ಳಿಯಲ್ಲಿ ನಡೆದಿದೆ.

Advertisement

ಶಿವಮೊಗ್ಗ ಜಿಲ್ಲೆ ಆಯನೂರು ಸಮೀಪದ ಮೈಸವಳ್ಳಿ ಗ್ರಾಮದಲ್ಲಿ ರೈತರು ಸಾಲ ಮರು ಪಾವತಿ ಮಾಡದ ಹಿನ್ನಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಮುಂದಾಗಿದ್ದರು. ಆದರೆ ರೈತರು, ರೈತ ಮುಖಂಡರ ಮತ್ತು  ಜಪ್ತಿ ಮಾಡಲು ಬಂದ ಬ್ಯಾಂಕ್ ಅಧಿಕಾರಿಗಳ ಮತ್ತು ರೈತರ ನಡುವೆ ವಾಗ್ವಾದ ನಡೆದಿದೆ.

ಶಿವಮೊಗ್ಗ ತಾಲೂಕಿನ ಪಿಎಲ್ ಡಿ ಬ್ಯಾಂಕ್ ಹಾಗೂ ಎಜೆನ್ಸಿ ಸಿಬ್ಬಂದಿ ಮತ್ತು ರೈತರ ನಡುವೆ ಗಲಾಟೆ ನಡೆದು ಅಂತಿಮವಾಗಿ ಜಪ್ತಿ ಮಾಡುವುದನ್ನು ತಡೆದು ರೈತರು ಅಧಿಕಾರಿಗಳನ್ನು ವಾಪಾಸು ಕಳುಹಿಸಿದ ಘಟನೆ ನಡೆದಿದೆ.

ಘಟನೆಯ ಬಳಿಕ ಬ್ಯಾಂಕ್ ಸಿಬ್ಬಂದಿಗಳು ಸ್ಥಳದಿಂದ ಪೊಲೀಸರು ತೆರಳಿದ್ದು, ಪೊಲೀಸರಿಗೆ ದೂರು ನೀಡುವುದಾಗಿ ಹೇಳಿರುವುದಾಗಿ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next