Advertisement

ಶಿವಮೊಗ್ಗ: ವಿವಿಧೆಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ

07:28 PM Mar 29, 2022 | Team Udayavani |

ಶಿವಮೊಗ್ಗ: ತಾಲೂಕಿನ ವಿವಿಧೆಡೆ ಮಂಗಳವಾರ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿಯಿತು. ಬಿಸಿಲಿನ ಕಂಗೆಟ್ಟಿದ ಜನ ಸ್ವಲ್ಪ ನಿರಾಳರಾದರು. ಮಳೆಯಿಂದ ಆಸ್ತಿಪಾಸ್ತಿಗೆ ಹಾನಿ ಉಂಟಾಗಿದ್ದು ಬೆಳೆ ಹಾನಿ ಕೂಡ ಆಗಿದೆ.

Advertisement

ಆಯನೂರು ಸುತ್ತಮುತ್ತ ಸಂಜೆ ವೇಳೆಗೆ ಜೋರ ಮಳೆ ಜೊತೆಗೆ ಆಲಿಕಲ್ಲು ಬಿದ್ದಿದ್ದು ಆಲಿಕಲ್ಲು ಬಿದ್ದ ರಭಸಕ್ಕೆ ಚನ್ನಹಳ್ಳಿ ಗ್ರಾಮದ ಮನೆಗಳ ಮೇಲಿನ ಹೆಂಚುಗಳು, ಸೋಲಾರ್ ಪ್ಯಾನಲ್‌ಗಳು ಒಡೆದು ಹೋಗಿವೆ. ಇನ್ನು, ಬಾಳೆ, ಅಡಕೆ ತೋಟಗಳಿಗೆ ಆಲಿಕಲ್ಲಿನಿಂದ ಹಾನಿ ಉಂಟಾಗಿದೆ. ಇದು ರೈತರಿಗೆ ನಷ್ಟ ಉಂಟುಮಾಡಿ ಚಿಂತೆಗೀಡು ಮಾಡಿದೆ.

ಆಯನೂರು ಸುತ್ತಮುತ್ತ ಹಲವು ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ ಎಂದು ತಿಳಿದು ಬಂದಿದೆ. ಇತ್ತ ಶಿವಮೊಗ್ಗ ನಗರದಲ್ಲಿಯು ಸಂಜೆ ಜೋರು ಮಳೆ ಸುರಿಯಿತು.

Advertisement

Udayavani is now on Telegram. Click here to join our channel and stay updated with the latest news.

Next