Advertisement

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

12:08 PM Apr 18, 2024 | keerthan |

ಶಿವಮೊಗ್ಗ: ಈ ಬಾರಿ ಅರ್ಜುನನ ಎದುರಿಗೆ ಭೀಷ್ಮ ಇದ್ದಾನೆ. ಅರ್ಜುನನ ರಥದಲ್ಲಿ ಕೃಷ್ಣ ಇದ್ದಾನೆ. ಆದರೆ ಭೀಷ್ಮ ಕೃಷ್ಣನ ಪೋಟೋ ಇಟ್ಟುಕೊಂಡಿದ್ದಾನೆ ಎಂದು ಋಷಿಕುಮಾರ ಸ್ವಾಮೀಜಿ ಹೇಳಿದರು.

Advertisement

ಶಿವಮೊಗ್ಗ ಲೋಕಸಭಾ ಕಣವನ್ನು ಕುರುಕ್ಷೇತ್ರ ಯುದ್ಧಕ್ಕೆ ಹೋಲಿಸಿದ ಅವರು ಬಿ.ವೈ.ರಾಘವೇಂದ್ರ ಅವರನ್ನು ಅರ್ಜುನನಿಗೆ ಮತ್ತು ಕೆ.ಎಸ್ ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದರು.

ಭೀಷ್ಮ ಶರಪಂಜರದ ಮೇಲೆ ಮಲಗುವ ಸಾಧ್ಯತೆಯಿದೆ. ಧರ್ಮ ಶಾಸ್ತ್ರ ಧರ್ಮವಾಗಿ ಯುದ್ದ ಮಾಡುವಂತೆ ಹೇಳುತ್ತದೆ. ಧರ್ಮದ ಜೊತೆಯಲ್ಲಿ ಇದ್ದವರು ಅಧರ್ಮವಾಗಿ ನಡೆದು ಕೊಳ್ಳುತ್ತಿದ್ದಾರೆ. ಧರ್ಮ ಯುದ್ದದಲ್ಲಿ ಅರ್ಜುನನಿಗೆ ಜಯ ಸಿಕ್ಕೆ ಸಿಗುತ್ತದೆ ಎಂದು ಋಷಿಕುಮಾರ ಸ್ವಾಮೀಜಿ ಹೇಳಿದರು.

ಬಿ.ವೈ.ರಾಘವೇಂದ್ರ ಅವರು ನಾಮಪತ್ರ ಸಲ್ಲಿಸುವಾಗ ನಾನು ಬರುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next