Advertisement

ಮಲೆನಾಡಿನಲ್ಲಿ ಭಾರೀ ಮಳೆ : ಶಿವಮೊಗ್ಗ-ಮಂಗಳೂರು ಹೆದ್ದಾರಿ ಬಂದ್

04:59 PM Jul 23, 2021 | Team Udayavani |

ಶಿವಮೊಗ್ಗ : ಮಲೆನಾಡಿನಲ್ಲಿ ಮುಂದುವರಿದಿರುವ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಶಿವಮೊಗ್ಗ-ಮಂಗಳೂರು ಹೆದ್ದಾರಿ ಬಂದ್ ಮಾಡಲಾಗಿದೆ. ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ತೀರ್ಥಹಳ್ಳಿ ಸಮೀಪದ ಶಿವರಾಜಪುರದ ಬಳಿ ಹಳ್ಳಕ್ಕೆ ಹಿಮ್ಮುಖವಾಗಿ ತುಂಗಾ ನದಿ ನೀರು ನುಗ್ಗಿವೆ.  ಹೀಗಾಗಿ‌ ಶಿವರಾಜಪುರದ ಬಳಿ ಸೇತುವೆ ಮೇಲೆ ನೀರು ತುಂಬಿವೆ.

Advertisement

ಇದೇ ಸೇತುವೆ ಮೇಲೆ ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಹೋದ ಲಾರಿಯೊಂದು ನೀರಿನಲ್ಲಿ ಸಿಲುಕಿಕೊಂಡಿದೆ. ತುಂಗಾ ನದಿ ನೀರಿನ ರಭಸಕ್ಕೆ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿ‌ಯು ಅಪಾಯಕ್ಕೆ ಸಿಲುಕಿತ್ತು.

ಈ ಘಟನೆ ನಡೆಯುತ್ತಿದ್ದಂತೆ ಲಾರಿಯನ್ನು ಅಲ್ಲೇ ನಿಲ್ಲಿಸಿ ಚಾಲಕನು ಸುರಕ್ಷಿತ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಲಾರಿಯನ್ನು ಸೇತುವೆಯಿಂದ ಹೊರತರಲು‌ ಹರಸಾಹಸ ಪಡಬೇಕಾದ ಪ್ರಸಂಗ ಎದುರಾಯಿತು. ಈ ಹಿನ್ನೆಲೆಯಲ್ಲಿಯೇ ಶಿವಮೊಗ್ಗ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next