Advertisement

ಕೋವಿಡ್ ವಾರಿಯರ್ಸ್ ಗೆ ಸನ್ಮಾನ

04:56 PM Jun 29, 2020 | Naveen |

ಶಿವಮೊಗ್ಗ: ನಗರದ ಕೋಟೆ ಶ್ರೀ ಸೀತಾರಾಮಂಜನೇಯ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾಗಿದ್ದು, ವಿಶೇಷವಾಗಿ ಶ್ರೀ ಆಂಜನೇಯನ ಉಪಾಸಕರಾಗಿದ್ದ ಭಕ್ತ ಶಿರೋಮಣಿ ಅನಂತರಾಮ ಅಯ್ಯಂಗಾರ್‌ ಅವರ 120ನೇ ಸಂಸ್ಮರಣಾ ಕಾರ್ಯಕ್ರವನ್ನು ಕುಟುಂಬ ವರ್ಗ, ದೇವಾಲಯದ ಭಜನಾ ಮಂಡಳಿ ಹಾಗೂ ಭಾರತೀಯ ವಿಚಾರ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ನೆರವೇರಿಸಲಾಯಿತು.

Advertisement

ಈ ಸಂದರ್ಭದಲ್ಲಿ ವಿಶೇಷವಾಗಿ ಕೋವಿಡ್ ವಾರಿಯರ್ಗಳಾಗಿ ಕಾರ್ಯನಿರ್ವಹಿಸುತ್ತಿರುವ ಐವರು ಆ್ಯಂಬುಲೆನ್ಸ್‌ ಚಾಲಕರಾದ ಅರುಣ್‌, ರಮೇಶ್‌, ಗ್ರೂಪ್‌ ಡಿ ನೌಕರರಾದ ಶಬರೀಶ್‌ ಹಾಗೂ ಲ್ಯಾಬ್‌ ತಂತ್ರಜ್ಞ ರಾಕೇಶ್‌ ಅವರನ್ನು ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಮಾತನಾಡಿದ ರಾಕೇಶ್‌, ಪವಿತ್ರ ಸ್ಥಳದಲ್ಲಿ ಗೌರವಿಸಿರುವುದು ನಿಜಕ್ಕೂ ಆತ್ಮವಿಶ್ವಾಸ ಹೆಚ್ಚಿಸಿದೆ. ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸ್ಫೂರ್ತಿ ನೀಡಿದೆ. ಮಾರುತಿಯ ದಯೆದಿಂದ ಕೋವಿಡ್ ಹಾವಳಿ ಶೀಘ್ರದಲ್ಲಿ ಕೊನೆಗೊಳ್ಳಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ದೇವಾಲಯದ ಪ್ರಧಾನ ಅರ್ಚಕ ಹೊ.ಅ.ಅನಂತರಾಮ ಅಯ್ಯಂಗಾರ್‌, ಎಚ್‌.ಆರ್‌.ಭಾರ್ಗವ ರಾಮ್‌, ಎಚ್‌.ಬಿ.ರಾಮಚರಣ್‌ ಹಾಗೂ ಎಚ್‌.ಕೆ.ದೀನದಯಾಳು ರಾಮಪ್ರಸಾದ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next