Advertisement

ಠಾಣೆಗೆ ನುಗ್ಗಿದ ನಾಗರಹಾವು!

01:36 PM May 13, 2020 | Naveen |

ಶಿವಮೊಗ್ಗ: ಇಲ್ಲಿನ ಪೂರ್ವ ಟ್ರಾಫಿಕ್‌ ಪೊಲೀಸ್‌ ಠಾಣೆಗೆ ನಾಗರಹಾವು ನುಗ್ಗಿದ್ದರಿಂದ ಠಾಣೆಯಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

Advertisement

ಉರಗ ಪ್ರೇಮಿ ಕಾಚಿನಕಟ್ಟೆಯ ಆಕಾಶ್‌ ನಾಗರ ಹಾವನ್ನು ಹಿಡಿದು, ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ. ವಿದ್ಯಾನಗರದಲ್ಲಿರುವ ಪೂರ್ವ ಸಂಚಾರಿ ಪೊಲೀಸ್‌ ಠಾಣೆಗೆ ನುಗ್ಗಿದ್ದ ಹಾವು, ಕೆಲಕಾಲ ಬಾಗಿಲು ಬಳಿ ಅವಿತು ಕುಳಿತಿತ್ತು. ಇದನ್ನು ಗಮನಿಸಿದ ಪೊಲೀಸರು ಕೂಡಲೇ ಆಕಾಶ್‌ಗೆ ಮಾಹಿತಿ ನೀಡಿದ್ದರು. ಕೆಲ ತಿಂಗಳ ಹಿಂದೆಯು ಈ ಠಾಣೆಯೊಳಗೆ ನಾಗರ ಹಾವು ನುಗ್ಗಿತ್ತು. ಆಗ ಸ್ನೇಕ್‌ ಕಿರಣ್‌ ಅವರು ಹಾವು ಹಿಡಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next