Advertisement

ಶಿಕಾರಿಪುರ –ಸೊರಬ ಸಂಚಾರ ಬಂದ್; ಮಣಿಪಾಲ-ಶಿವಮೊಗ್ಗ ಬದಲಿ ಮಾರ್ಗ ಯಾವುದು?

09:21 AM Aug 11, 2019 | Nagendra Trasi |

ಶಿವಮೊಗ್ಗ: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಕುಮದ್ವತಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಶಿಕಾರಿಪುರ ಬಳಿ  ಗೌರಿ ಹಳ್ಳ ಎಂಬಲ್ಲಿ ಕುಮದ್ವತಿ ನದಿ ರಸ್ತೆ ಗೆ ನುಗಿದೆ‌.

Advertisement

ರಸ್ತೆ ಮೇಲೆ 3- 4 ಅಡಿ ನೀರು ಹರಿಯುತ್ತಿರುವ ಪರಿಣಾಮ ಶಿಕಾರಿಪುರ – ಶಿರಾಳಕೊಪ್ಪ – ಸೊರಬ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಶಿವಮೊಗ್ಗದಿಂದ- ತೀರ್ಥಹಳ್ಳಿ ಎಲ್ಲಾ ಮಾರ್ಗಗಳು ಕಡಿತದಿಂದ ರದ್ದಾದ ಮಾರ್ಗಗಳು..

* ಶಿವಮೊಗ್ಗ ಮಂಡಗದ್ದೆ ತೀರ್ಥಹಳ್ಳಿ

*ಶಿವಮೊಗ್ಗ ಆಯನೂರು ಕನ್ನಂಗಿ ಬೆಜ್ಜುವಳ್ಳಿ ತೀರ್ಥಹಳ್ಳಿ .

Advertisement

*ತೀರ್ಥಹಳ್ಳಿ_ಕೊಪ್ಪ ರಸ್ತೆ ಸದ್ಯಕ್ಕೆ ಬಂದ್

*ತೀರ್ಥಹಳ್ಳಿ _ಆಗುಂಬೆ ರಸ್ತೆ ಬಂದ್.

*ಕಮ್ಮರಡಿ_ಕಲ್ಮನೆ ಸಂಪರ್ಕ ಬಂದ್ ಆಗಿದೆ

ಸದ್ಯಕ್ಕೆ ಇರುವ ಮಾರ್ಗ

ಶಿವಮೊಗ್ಗ ಆಯನೂರು ರಿಪ್ಪನ್ ಪೇಟೆ ಹುಂಚ ಕೊಣಂದೂರು_ತೀರ್ಥಹಳ್ಳಿ

ಮಣಿಪಾಲ್ ಗೆ ಹೋಗುವವರು ..ಶಿವಮೊಗ್ಗ ರಿಪ್ಪನ್ ಪೇಟೆ ನಗರ ಮಾರ್ಗವನ್ನು ಬಳಸಬಹುದಾಗಿದೆ,

Advertisement

Udayavani is now on Telegram. Click here to join our channel and stay updated with the latest news.

Next