Advertisement

Shikaripur; ಈದ್ ಮಿಲಾದ್ ಕಮಿಟಿ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ

06:40 PM Aug 21, 2023 | Team Udayavani |

ಶಿಕಾರಿಪುರ: ಈದ್ ಮಿಲಾದ್ ಕಮಿಟಿಗೆ ಪದಾಧಿಕಾರಿಗಳ ಅಯ್ಕೆ ಸಂಬಂಧಿಸಿದಂತೆ   ಕೆಎಚ್ ಬಿ ಬಡಾವಣೆ ಸಮೀಪ ಸೋಮವಾರ ನಡೆದ ಸಭೆಯ ಸಂದರ್ಭದಲ್ಲಿ ಒಂದೇ ಕೋಮಿನ ಯುವಕರ ಗುಂಪುಗಳ ಮಧ್ಯೆ  ಗಲಾಟೆ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆಯಾದ ವ್ಯಕ್ತಿ ಜನ್ನತ್ ಗಲ್ಲಿ ನಿವಾಸಿ ಜಾಫರ್(32) ಎಂದು ತಿಳಿದು ಬಂದಿದೆ.

Advertisement

ಯುವಕರ ಗುಂಪಿನ ನಡುವೆ ನಡೆದ ಚರ್ಚೆ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಈ ಸಂದರ್ಭದಲ್ಲಿ ಚಾಕುವಿನಿಂದ ಚುಚ್ಚಿ ಜಾಫರ್ ಅವರನ್ನು ಆರೋಪಿಗಳು ಕೊಲೆ ಮಾಡಿದ್ದಾರೆ.

ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಭದ್ರತೆ ಕೈಗೊಂಡು ತನಿಖೆ ನಡೆಸುತ್ತಿದ್ದಾರೆ. ಕೊಲೆ ನಡೆದ ಬಡಾವಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next