Advertisement

Shiggavi Bypoll; ಗೆಲ್ಲುವ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಲಿದೆ: ಸಂತೋಷ್ ಲಾಡ್

11:41 AM Jun 29, 2024 | Team Udayavani |

ಹುಬ್ಬಳ್ಳಿ: ಶಿಗ್ಗಾವಿ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಪಕ್ಷಕ್ಕೆ ಬಿಟ್ಟ ವಿಚಾರ. ಈ ಕುರಿತು ಪಕ್ಷವೂ ಕೂಡ ಸಮೀಕ್ಷೆ ಮಾಡಲಿದೆ. ಯಾರು ಗೆಲ್ಲುವ ಅಭ್ಯರ್ಥಿ ಎಂದು ಗುರುತಿಸಿ ಟಿಕೆಟ್ ನೀಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಈ ಕುರಿತು ಸಭೆ ಕರೆದಿದ್ದರು. ಹೋಗಲಿಕ್ಕೆ ಆಗಿರಲಿಲ್ಲ. ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸುತ್ತಾರೆ. ಅವರಲ್ಲಿ ಯಾರು ಗೆಲ್ಲುವ ಅಭ್ಯರ್ಥಿ ಎಂದು ಪರಿಗಣಿಸಿ ಪಕ್ಷ ನಿರ್ಧರಿಸಲಿದೆ. ಈ ಕುರಿತು ಇನ್ನೊಂದು ವಾರದಲ್ಲಿ ಸಮಿತಿ ಸಭೆಯಾಗಲಿದೆ. ಸಭೆಯಲ್ಲಿ ಚರ್ಚಿಸಿ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಸಿಎಂ ಬದಲಾವಣೆ ಕುರಿತು ಸ್ವಾಮೀಜಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈ ಕುರಿತು ಮುಖ್ಯಮಂತ್ರಿಗಳು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಮುಖ್ಯಮಂತ್ರಿ ಹುದ್ದೆ ಶಾಸಕರ ಅಭಿಪ್ರಾಯ ಪಡೆದು ಹಾಗೂ ಪಕ್ಷದ ಹೈಕಮಾಂಡ್ ನಿರ್ಧಾರದ ಮೇಲೆ ಆಯ್ಕೆಯಾಗುತ್ತಾರೆ. ಯಾಕೆ ಈ ರೀತಿ ಹೇಳಿದರು ಎಂದು ಸ್ವಾಮೀಜಿ ಅವರನ್ನು ಕೇಳಿದರೆ ಒಳಿತು ಎಂದರು.

ಬಿಜೆಪಿ ಅವರಿಗೆ ಮಾತನಾಡಲು ಯಾವುದೇ ವಿಚಾರಗಳಿಲ್ಲ‌. ವಿರೋಧ ಪಕ್ಷವಾಗಿ ಸಕರಾತ್ಮಕ ವಿರೋಧ ಹಾಗೂ ಟೀಕೆ ಮಾಡಬೇಕು. ಆದರೆ ಬೆಳಕಾದರೆ ಒಂದಲ್ಲಾ ಒಂದು ಪ್ರತಿಭಟನೆ ಮಾಡಿ ಜನರಿಗೆ ತೊಂದರೆ ಕೊಡುವ ಕೆಲಸ ಆಗುತ್ತಿದೆ. ಇವರ ಅವಧಿಯಲ್ಲಿ ಬೆಲೆ ಏರಿಕೆ ಆಗಲಿಲ್ಲವೇ? ಕೇಂದ್ರದಲ್ಲಿ ಮ್ಯಾಜಿಕಲ್ ಮ್ಯಾನ್ ನರೇಂದ್ರ ಮೋದಿ ಬಂದ ನಂತರ ಸಾಲ ಎಷ್ಟಾಗಿದೆ ಎಂಬುವುದು ಇಡೀ ದೇಶಕ್ಕೆ ಗೊತ್ತಾಗಿದೆ. ಅಧಿಕಾರ ತಪ್ಪಿದ ಮೇಲೆ ಕೇವಲ ಮಾಧ್ಯಮಗಳ ಮುಂದೆ ಮಾತನಾಡುವುದೇ ಇವರ ಕೆಲಸವಾಗಿದೆ ಎಂದು ಲೇವಡಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next