Advertisement

ಕುರುಬರ ಹೋರಾಟದಲ್ಲಿ ಶೆಫ‌ರ್ಡ್‌ ಇಂಡಿಯಾ ಭಾಗಿ

03:12 PM Feb 05, 2021 | Team Udayavani |

ಕೋಲಾರ: ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆಸುತ್ತಿರುವ ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿಗಾಗಿ ಹೋರಾಟದ ಪಾದಯಾತ್ರೆಯಲ್ಲಿ ಜಿಲ್ಲೆಯ ಶೇಫರ್ಡ್‌ ಇಂಡಿಯಾ ಇಂಟರ್‌ ನ್ಯಾಷನಲ್‌ ಜಿಲ್ಲಾಧ್ಯಕ್ಷ ಸಿ.ಸೋಮಶೇಖರ್‌ ನಾಯಕತ್ವದಲ್ಲಿ ಸಮಾಜದ ಬಂಧುಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Advertisement

ಈ ಸಂದರ್ಭದಲ್ಲಿ ಶೆಫರ್ಡ್‌ ಇಂಡಿಯಾ ಇಂಟರ್‌ ನ್ಯಾಷನಲ್‌ ಕಾರ್ಯಾಧ್ಯಕ್ಷ ಧನಮಟ್ನಹಳ್ಳಿ ವೆಂಕಟೇಶ್‌, ಕೋಲಾರ ತಾಲೂಕು ಅಧ್ಯಕ್ಷ ವಿ.ಶ್ರೀನಿವಾಸ್‌, ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ಎಂ.ರೆಡ್ಡಪ್ಪ, ಮುಳಬಾಗಿಲು ತಾಲೂಕು ಅಧ್ಯಕ್ಷ ಶಿವಣ್ಣ, ಕೆಜಿಎಫ್‌ ತಾಲೂಕು ಅಧ್ಯಕ್ಷ ಮಾರಸಂದ್ರ ಬಾಬು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ :ಅಕ್ರಮ ಗಣಿಗಾರಿಕೆ: ಕ್ರಿಮಿನಲ್‌ ಕೇಸು ದಾಖಲಿಸಿ

ಫೆ.7 ರಂದು ಬೆಂಗಳೂರು, ತುಮಕೂರು ರಸ್ತೆ, ಮಾದಾವರದಲ್ಲಿರುವ ಇಂಟರ್‌ ನ್ಯಾಷನಲ್‌ ಎಕ್ಸಿಬಿಷನ್‌ ಮೈದಾನದಲ್ಲಿ  ಕರ್ನಾಟಕದ ಕುರುಬ ಸಮಾಜದ ಒಕ್ಕೊರಲ ಧ್ವನಿ ”ಕುರುಬರ ಜಾಗೃತಿ ಸಮಾವೇಶ” ಮೊಳಗಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಜಿಲ್ಲೆಯ ಸಮುದಾಯದ ಜನ ಪಾಲ್ಗೊಳ್ಳಬೇಕು ಎಂದು ಸಿ.ಸೋಮಶೇಖರ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next