Advertisement

ತರೂರ್‌ ಮತ್ತೆ ಸಲ್ಲದ ಮಾತು

06:00 AM Aug 07, 2018 | Team Udayavani |

ತಿರುವನಂತಪುರ/ನವದೆಹಲಿ: ಕೇಂದ್ರದ ಮಾಜಿ ಸಚಿವ ಶಶಿ ತರೂರ್‌ ಸೋಮವಾರ ಮತ್ತೂಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಾಗಾಲ್ಯಾಂಡ್‌ ಮತ್ತು ಇತರ ಈಶಾನ್ಯ ರಾಜ್ಯಗಳಿಗೆ ಪ್ರವಾಸ ತೆರಳಿದಾಗ ನಾಗಾ ಜನರ ಸಾಂಪ್ರದಾಯಿಕ ಶಿರಸ್ತ್ರಾಣ ಧರಿಸುತ್ತಾರೆ. ಆದರೆ ಮುಸ್ಲಿಮರ ಟೋಪಿ ಧರಿಸಲು ನಿರಾಕರಿಸುತ್ತಾರೆ ಎಂದು ಹೇಳಿದ್ದಾರೆ. ಇಂದಿರಾ ಗಾಂಧಿ ಕೂಡ ವಿವಿಧ ರೀತಿಯ ದಿರಿಸುಗಳನ್ನು ಧರಿಸಿದ್ದರು. ಆದರೆ ಅವರು (ಮೋದಿ) ಅದೊಂದಕ್ಕೆ (ಮುಸ್ಲಿಮರ ಟೋಪಿ) ಮಾತ್ರ ಏಕೆ ಬೇಡವೆನ್ನುತ್ತಾರೆ ಎಂದು ಪ್ರಶ್ನಿಸಿದ್ದಾರೆ. 

Advertisement

ತಿರುವನಂತಪುರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನ ಪುನರ್‌ರಚಿಸಲಿದ್ದಾರೆ ಮತ್ತು ಭಾರತವನ್ನು ಹಿಂದೂ ಪಾಕಿಸ್ತಾನವನ್ನಾಗಿ ಪರಿವರ್ತಿಸಲಿದ್ದಾರೆ ಎಂದಿದ್ದರು. ಕ್ಷಮೆ ಕೇಳಲಿ: ತಿರುವನಂತಪುರ ಕ್ಷೇತ್ರದ ಸಂಸದ ತರೂರ್‌ ಮಾತುಗಳು ವಿವಾದಕ್ಕೆ ಕಾರಣವಾಗಿದೆ. ತರೂರ್‌ ಹೇಳಿಕೆಗೆ ಕಾಂಗ್ರೆಸ್‌ ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಸಚಿವ ಕಿರಣ್‌ ರಿಜಿಜು ಒತ್ತಾಯಿಸಿದ್ದಾರೆ. 

ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಡಾ.ಜಿತೇಂದ್ರ ಸಿಂಗ್‌, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ರಾಜ್ಯವರ್ಧನ ಸಿಂಗ್‌ ರಾಥೋಡ್‌ ಕೂಡ ತರೂರ್‌ ಹೇಳಿಕೆ ಖಂಡಿಸಿದ್ದಾರೆ. ತರೂರ್‌ ಹೇಳಿಕೆ ಈಶಾನ್ಯ ರಾಜ್ಯದವರ ಸಂಸ್ಕೃತಿಗೆ ಅವಮಾನ ಮಾಡಿದಂತಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಂ ಮಾಧವ್‌ ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next