Advertisement

ಹೊಸಬರ “ಶಾಸನ’

02:56 PM Jul 18, 2018 | Sharanya Alva |

ಹೊಸ ಬಗೆಯ ಶೀರ್ಷಿಕೆಗಳನ್ನಿಟ್ಟುಕೊಂಡು ಸಾಕಷ್ಟು ಸಿನಿಮಾಗಳು ಬರುತ್ತಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಶಾಸನ’. “ಶಾಸನ’ ಎಂಬ ಚಿತ್ರವೊಂದು ಆರಮಭವಾಗಿದೆ. ಇತ್ತೀಚೆಗೆ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿದೆ. “ಅಹಿಂಸೆ’, “ಚಿನ್ನದ ಗೊಂಬೆ’ ಚಿತ್ರಗಳನ್ನು ನಿರ್ದೇಶಿಸಿರುವ ಪಂಕಜ್‌ ಬಾಲನ್‌ ಈ ಚಿತ್ರದ ನಿರ್ದೇಶಕರು. ಇದು ಎರಡು ಶತಮಾನದ ಕಥೆಯನ್ನು ಹೊಂದಿದ್ದು, ಮೊದಲ ಶತಮಾನದಲ್ಲಿ ನಾಯಕನಾಗಿ ಶ್ರೀಧರ್‌ ಹಾಗೂ ಧನು ನಟಿಸುತ್ತಿದ್ದಾರೆ. ಚಿತ್ರದಲ್ಲಿ ರಂಜಿತಾ ರಾವ್‌, ಹರ್ಷಿತಾ ಗೌಡ ನಾಯಕಿಯರಾಗಿ ನಟಿಸುತ್ತಿದ್ದಾರೆ.

Advertisement

ಉಳಿದಂತೆ ಜಯಸಿಂಹಮುಸುರಿ, ಬ್ಯಾಂಕ್‌ಜನಾರ್ಧನ್‌, ಕುರಿಸುನೀಲ್‌, ಕೆಂಪೆಗೌಡ ನಟಿಸುತ್ತಿದ್ದಾರೆ. ನಾಲ್ಕು ಹಾಡುಗಳಿಗೆ ಕಾರ್ತಿಕ್‌ ವೆಂಕಟೇಶ್‌ ಸಂಗೀತ ಸಂಯೋಜಿಸುತ್ತಿದ್ದಾರೆ.  ನಾಲ್ಕು ಸಾಹಸ ದೃಶ್ಯಗಳಿಗೆ ಕೊಲ್ಲೂರು ಬಾಬು ನಿರ್ದೇಶನ  ಮಾಡಲಿದ್ದಾರೆ. ಮನುಶ್ರೀ ಮೂವೀ ಮೇಕರ್ ಮೂಲಕ ಆರ್‌.ವಿ.ಲಕ್ಷೀ ನಿರ್ಮಾಣ ಮಾಡುತ್ತಿದ್ದಾರೆ.  ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.
 

Advertisement

Udayavani is now on Telegram. Click here to join our channel and stay updated with the latest news.

Next