ಗ್ರೇಟರ್ ನೊಯ್ಡಾ: ಉತ್ತರಪ್ರದೇಶದ ಶಾರದಾ ವಿಶ್ವವಿದ್ಯಾಲಯದ ಬಿಎ ರಾಜ್ಯಶಾಸ್ತ್ರ ಪ್ರಶ್ನೆಪತ್ರಿಕೆಯೊಂದರಲ್ಲಿ ವಿಚಿತ್ರ ಪ್ರಶ್ನೆಯೊಂದನ್ನು ಕೇಳಲಾಗಿದೆ. ಪರಿಣಾಮ ಈ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಉಪನ್ಯಾಸಕರು ಅಮಾನತಾಗಿದ್ದಾರೆ. ನಾಜಿ ವಾದ, ಫ್ಯಾಸಿಸಂ ಹಾಗೂ ಹಿಂದುತ್ವದ ನಡುವೆ ಏನಾದರೂ ಹೋಲಿಕೆಗಳಿವೆಯೇ? ಎಂದು ಕೇಳಲಾಗಿದೆ.
ಈ ವಿಷಯ ಸಾಮಾಜಿಕ ತಾಣಗಳಲ್ಲಿ ಬಹಿರಂಗವಾದ ಬಳಿಕೆ ಭಾರೀ ವಿವಾದ ಉಂಟಾಗಿದೆ. ತಕ್ಷಣ ಮಧ್ಯಪ್ರವೇಶಿಸಿರುವ ಶಾರದಾ ವಿಶ್ವವಿದ್ಯಾಲಯ, ಸಾಮಾಜಿಕ ಸಾಮರಸ್ಯ ಹಾನಿ ಮಾಡುವ ಇಂತಹ ಯಾವುದೇ ಪ್ರಶ್ನೆಗಳನ್ನು ವಿವಿ ಬೆಂಬಲಿಸುವುದಿಲ್ಲ ಎಂದಿದೆ ಮಾತ್ರವಲ್ಲ ತನಿಖೆಗೆ ಸಮಿತಿಯನ್ನೂ ರಚಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ನಾಯಕ ವಿಕಾಸ್ ಪ್ರೀತಮ್ ಸಿನ್ಹಾ ಈ ಪ್ರಶ್ನೆಪತ್ರಿಕೆಯನ್ನು ಯಾರೋ ಮುಸ್ಲಿಂ ಉಪನ್ಯಾಸಕರೇ ಸಿದ್ಧಪಡಿಸಿರಬೇಕು ಎಂದು ಆರೋಪಿಸಿದ್ದಾರೆ.