Advertisement

ಹೊಳೆ ದಾಟಿದ ಮೇಲೆ ಅಂಬಿಗ ಏನೋ ಆದ: ಅನ್ಸಾರಿ ವಿರುದ್ಧ ಶರವಣ ಆಕ್ರೋಶ

02:25 PM Oct 17, 2021 | Team Udayavani |

ಬೆಂಗಳೂರು: ‘ಇಕ್ಬಾಲ್ ಅನ್ಸಾರಿ ಅವರೇ ನೀವು ಇಷ್ಟು ಬೇಗ ಹಳೆಯದನ್ನೆಲ್ಲ ಮರೆತರೆ ಹೇಗೆ? ನಿಮ್ಮ ಹುಳುಕು ಮುಚ್ಚಿಕೊಳ್ಳಲು ಹೆಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಬೇಡ’ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ಟಿ. ಎ ಭಾನುವಾರ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

Advertisement

‘ಕೊಪ್ಪಳದಲ್ಲಿ ನೀವು ಎಷ್ಟು ಕೊನೆಯಲ್ಲಿದ್ದಿರಿ? ಕಾಂಗ್ರೆಸ್’ನಲ್ಲಿ ನಿಮ್ಮ ಸ್ಥಾನ ಎಷ್ಟು ಕೊನೆಯಲ್ಲಿತ್ತು ಎನ್ನುವುದು ಎನ್ನುವುದು ನಿಮಗಿಂತ ಕೊಪ್ಪಳದ ಜನತೆಗೆ ಚೆನ್ನಾಗಿ ಗೊತ್ತಿದೆ. ಜೆಡಿಎಸ್ ಅಭ್ಯರ್ಥಿ ಆಗಿದ್ದಾಗ ಎರಡು ಸಲ ಗೆದ್ದಿರಿ. ಅದೇ ಕಾಂಗ್ರೆಸ್ ಪಕ್ಷದಲ್ಲಿ ಎರಡು ಸಲ ಅಭ್ಯರ್ಥಿ ಆದಾಗ ಮಕಾಡೆ ಮಲಗಿದ್ದು ಯಾಕೆ?’ ಎಂದು ಪ್ರಶ್ನಿಸಿದ್ದಾರೆ.

‘ಧರ್ಮಸಿಂಗ್ ಸಂಪುಟದಲ್ಲಿ ಪ್ರಮಾಣ ಸ್ವೀಕರಿಸುವಾಗ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಪ್ರಮಾಣ ತೆಗೆದುಕೊಳ್ಳುವಾಗ ನಿಮ್ಮ ಆತ್ಮಸಾಕ್ಷಿ ಎಲ್ಲಿ ಹೋಗಿತ್ತು ಅನ್ಸಾರಿ ಅವರೇ? ಅವತ್ತು ಡಿಸಿಎಂ ಆಗಿ ಪ್ರಮಾಣ ಸ್ವೀಕಾರ ಮಾಡಿದಾಗ ಸಿದ್ದರಾಮಯ್ಯ ಹೆಸರಿನಲ್ಲೇ ನೀವು ಪ್ರಮಾಣ ಯಾಕೆ ಸ್ವೀ ಕರಿಸಲಿಲ್ಲ?’

‘ಗಂಗಾವತಿಯಲ್ಲಿ ಚುನಾವಣೆಯಲ್ಲಿ ಗೆಲ್ಲಲು ಏದುಸಿರು ಬಿಡುತ್ತಿದ್ದ ನೀವು ದಡ ಸೇರಲು ಇದೇ ಕುಮಾರಸ್ವಾಮಿ ಅವರ ನೆರವು ಬೇಕಾಯಿತು. ಹೊಳೆ ದಾಟಿದ ಮೇಲೆ ಅಂಬಿಗ ಏನೋ ಆದ ಎಂಬ ಗಾದೆ ಮಾತಿನಂತೆ ಇದೆ ನಿಮ್ಮ ವರಸೆ’ ಎಂದು ಟ್ವೀಟ್ ಗಳಲ್ಲಿ ಕುಟುಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next