Advertisement

ಬೆಳ್ತಂಗಡಿ: ಉಪವಾಸ ಸತ್ಯಾಗ್ರಹ

07:45 AM Aug 09, 2017 | Team Udayavani |

ಬೆಳ್ತಂಗಡಿ, ಬಂಟ್ವಾಳ: ಶರತ್‌ ಹತ್ಯೆ ಆರೋಪಿಗಳ ಬಂಧನಕ್ಕೆ ಆಗ್ರಹ

Advertisement

ಬೆಳ್ತಂಗಡಿ: ಬಿ.ಸಿ.ರೋಡ್‌ನ‌ ಶರತ್‌ ಮಡಿವಾಳ ಅವರ ಹತ್ಯೆಯ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಮಂಗಳವಾರ ಇಲ್ಲಿನ ತಾಲೂಕು ಕಚೇರಿ ಬಳಿ ಉಪವಾಸ ಸತ್ಯಾಗ್ರಹ ನಡೆಯಿತು. ಶರತ್‌ ಕೊಲೆ ಆರೋಪಿಗಳನ್ನು ಬಂಧಿಸಲು ರಾಜ್ಯ ಸರಕಾರ ವಿಫಲವಾಗಿದೆ ಎಂದು ರಾಜ್ಯ ಸರಕಾರದ ವಿರುದ್ಧ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ನಡೆದ ಉಪವಾಸ ಸತ್ಯಾಗ್ರಹಗಳಂತೆ  ಬೆಳ್ತಂಗಡಿಯಲ್ಲಿ ಕೂಡ ನಡೆಸಲಾಯಿತು. 

ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್‌ ಜಿ. ಗೌಡ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರೀಶ್‌ ಪೂಂಜಾ, ತಾ. ಪಂ.ಸದಸ್ಯರಾದ ಶಶಿಧರ ಕಲ್ಮಂಜ, ಪುಂಡಲೀಕ  ಆಚಾರ್ಯ, ಅಮಿತಾ, ಮಾಜಿ ಅಧ್ಯಕ್ಷೆ ಜಯಂತಿ ಪಾಲೇದು, ಬಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ ಭಾಸ್ಕರ ಧರ್ಮಸ್ಥಳ, ವಿಹಿಂಪ ಜಿಲ್ಲಾ  ಉಪಾಧ್ಯಕ್ಷ ತಿಮ್ಮಪ್ಪ ಗೌಡ, ನಗರಾಧ್ಯಕ್ಷ ಮೋಹನ್‌, ತಾಲೂಕು ಕಾರ್ಯದರ್ಶಿ ನವೀನ್‌ ನೆರಿಯ, ತಾ. ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸುಧೀರ್‌ ಆರ್‌. ಸುವರ್ಣ, ಬಜರಂಗದಳದ ರಾಮ್‌ ಪ್ರಸಾದ್‌ ಮರೋಡಿ, ತಾ.ಪಂ. ಮಾಜಿ ಸದಸ್ಯ ಜಯಂತ್‌ ಕೋಟ್ಯಾನ್‌, ಬಿಜೆಪಿ ಮುಖಂಡರಾದ ಸೀತಾರಾಮ ಬಿ.ಎಸ್‌., ನಾರಾಯಣ ಆಚಾರ್‌, ನಂದ ಕುಮಾರ್‌, ಮಾಧವ ಗೌಡ ಶಿಬಾಜೆ, ರಕ್ಷಿತ್‌ ಶೆಟ್ಟಿ ಪಣೆಕ್ಕರ, ಜಗದೀಶ್‌ ಹೆಗ್ಡೆ, ಪ್ರಕಾಶ್‌ ಮೊದಲಾದವರು ಪಾಲ್ಗೊಂಡಿದ್ದರು. ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next