Advertisement

ಶರತ್‌ ಕೊಲೆ ಆರೋಪಿಗಳ ಶೀಘ್ರ ಬಂಧನ ವಿಶ್ವಾಸ: ಸಚಿವ ರೈ

04:00 AM Jul 14, 2017 | Team Udayavani |

ಮಂಗಳೂರು: ಶರತ್‌ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ಬಗ್ಗೆ  ಸುಳಿವು ಲಭ್ಯವಾ ಗಿರುವುದಾಗಿ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದು ಶೀಘ್ರದಲ್ಲೇ ಬಂಧನವಾಗುವ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ  ಬಿ. ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಈಗಾಗಲೇ ರಾಜ್ಯದ ಹಿರಿಯ ಅಧಿಕಾರಿಗಳು ಜಿಲ್ಲೆಗೆ ಆಗಮಿಸಿದ್ದು ಕೊಲೆ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸಿದ್ದಾರೆ. ಎಂದರು. 

2 ತಿಂಗಳಿಗೊಮ್ಮೆ ಶಾಂತಿಸಭೆ: ಹಿಂದೆ ಕೋಮು ಸಂಘರ್ಷ ತಲೆದೋರಿದಾಗ ಶಾಂತಿಸಭೆಗಳನ್ನು  ನಡೆಸಲಾ ಗುತ್ತಿತ್ತು. ಇನ್ನು ಮುಂದೆ ತಾಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ  2 ತಿಂಗಳಿಗೊಮ್ಮೆ  ಶಾಂತಿಸಭೆಯನ್ನು ನಡೆಸಲಾಗುವುದು ಎಂದರು. 

ಶರತ್‌ ಸಾವಿನ ಘೋಷಣೆ ವಿಳಂಬ ಮಾಡಲಾಗಿದೆ ಎಂಬ ವರದಿಗಳ ಬಗ್ಗೆ ಉತ್ತರಿಸಿದ ಸಚಿವ ಖಾದರ್‌, ಸಾವಿನ ವಿಚಾರ ಆಸ್ಪತ್ರೆಯ ವೈದ್ಯರು ಘೋಷಣೆ ಮಾಡುವ ಪ್ರಕ್ರಿಯೆ. ಇದಕ್ಕೆ  ಆಡಳಿತ ಮಂಡಳಿಯವರು  ಉತ್ತರ ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next