Advertisement

ಶಾಂತಿನಗರ-ಮೇಲೂರು ರಸ್ತೆ ಕುಸಿತ: ಸಂಪರ್ಕ ಕಡಿತ

11:37 AM Aug 19, 2018 | Team Udayavani |

ನೆಲ್ಯಾಡಿ : ಕಾಂಚನದಿಂದ ಶಾಂತಿನಗರ ಮೂಲಕ ಮೇಲೂರುಗೆ ಸಂಪರ್ಕ ಕಲ್ಪಿಸುವ ಜಿ.ಪಂ. ರಸ್ತೆಯು ಪಾಜಳಿಕೆ ಎನ್ನುವಲ್ಲಿ ಕುಸಿತವಾಗಿದೆ. ಈ ರಸ್ತೆಯಲ್ಲಿ ಬಸ್ಸು ಹಾಗೂ ಇತರ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಾಜಳಿಕೆಯಲ್ಲಿ ಡಾಮರು ರಸ್ತೆ ಕುಸಿತಗೊಂಡಿದೆ. ಈ ಭಾಗದಿಂದ ದಿನಂಪ್ರತಿ ಉಪ್ಪಿನಂಗಡಿ ಹಾಗೂ ಇತರೆಡೆ ಸಂಚರಿಸುವ ಸಾರ್ವಜನಿ ಕರು ಹಾಗೂ ಶಾಲಾ ಮಕ್ಕಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಉಪ್ಪಿನಂಗಡಿಯಿಂದ ಕಾಂಚನ- ಶಾಂತಿನಗರಕ್ಕೆ ದಿನಂಪ್ರತಿ 8 ಬಾರಿ ಕೆಎಸ್‌ ಆರ್‌ಟಿಸಿ ಬಸ್ಸು ಓಡಾಟ ನಡೆಸುತ್ತದೆ. ರಸ್ತೆ ಕುಸಿತಗೊಂಡಿರುವುದರಿಂದ ಬಸ್ಸು ಕಾಂಚನ ಪೇಟೆಯಿಂದ ಸ್ವಲ್ಪ ಮುಂದೆ ಶಾಂತಿನಗರ ಜಿ.ಪಂ. ರಸ್ತೆಗೆ ತಿರುಗುವಲ್ಲಿಯವರೆಗೆ ಬರುತ್ತಿದ್ದು, ಅಲ್ಲಿಂದ ಮುಂದೆ ಓಡಾಟ ಸಾಧ್ಯವಾಗುತ್ತಿಲ್ಲ. ಅಲ್ಲಿಂದ ಶಾಂತಿನಗರಕ್ಕೆ ನಾಲ್ಕೈದು  ಕಿ.ಮೀ. ದೂರವಿದ್ದು, ಬಸ್ಸಿನಲ್ಲಿ ಬಂದ ಪ್ರಯಾಣಿಕರು ನಡೆದುಕೊಂಡೇ ತೆರಳಬೇಕಾಗಿದೆ. ರಸ್ತೆ ಕುಸಿತಗೊಂಡಿರುವ ಬಗ್ಗೆ ಮಾಹಿತಿ ಇಲ್ಲದೇ ಬರುವ ಕೆಲ ಲಘು ವಾಹನಗಳು ಇಲ್ಲಿ ಹೂತು ಹೋಗುತ್ತಿದೆ. 

Advertisement

ತಿಂಗಳ ಹಿಂದೆ ಈ ರಸ್ತೆ ಹೊಂಡ-ಗುಂಡಿಗಳಿಂದ ಕೂಡಿತ್ತು. ಆ ಸಂದರ್ಭ ವಾಹನಗಳ ಓಡಾಟಕ್ಕೆ ತೊಂದರೆ ಯಾಗಿತ್ತು. ಸಾರ್ವಜನಿಕರ ದೂರಿಗೆ ಸ್ಪಂದಿ ಸಿದ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ ಅವರು ತುರ್ತು ದುರಸ್ತಿಗೆ ಕ್ರಮ ಕೈಗೊಂಡಿದ್ದರು. ಇದೀಗ ರಸ್ತೆ ಕುಸಿತದಿಂದ ಸಾರ್ವಜನಿಕರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾತ್ಕಾಲಿಕ ದುರಸ್ತಿ
ರಸ್ತೆ ಕುಸಿತಗೊಂಡಿರುವ ಪಾಜಳಿಕೆಯಲ್ಲಿ ಜಿ.ಪಂ. ಸದಸ್ಯರ ಸೂಚನೆ ಮೇರೆಗೆ ತುರ್ತು ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಕಲ್ಲು ತಂದು ಹಾಕಿ ಬಸ್ಸು ಹಾಗೂ ವಾಹನಗಳ ಓಡಾಟಕ್ಕೆ ಅನುಕೂಲವಾಗುವಂತೆ ಗ್ರಾ.ಪಂ.ನಿಂದ ತಾತ್ಕಾಲಿಕವಾಗಿ ದುರಸ್ತಿ ಮಾಡಲಾಗಿದೆ.
– ನಯನಾಕುಮಾರಿ,
ಗೋಳಿತ್ತೂಟ್ಟು ಪಿಡಿಒ.

Advertisement

Udayavani is now on Telegram. Click here to join our channel and stay updated with the latest news.

Next