Advertisement

Ranji Trohpy: ಶಮಿ ಬಂಗಾಲ ತಂಡದಲ್ಲಿಲ್ಲ; ಮುಂಬೈಗೆ ಸರ್ಫರಾಜ್‌ ಅಲಭ್ಯ

10:39 PM Oct 08, 2024 | Team Udayavani |

ಕೋಲ್ಕತಾ: ಇನ್ನೂ ಫಿಟ್‌ನೆಸ್‌ಗೆ ಮರಳದ ಭಾರತದ ಪ್ರೀಮಿಯರ್‌ ಪೇಸರ್‌ ಮೊಹಮ್ಮದ್‌ ಶಮಿ ಬಂಗಾಲ ರಣಜಿ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಹಿರಿಯ ಆಟಗಾರರಾದ ವೃದ್ಧಿಮಾನ್‌ ಸಾಹಾ, ಸುದೀಪ್‌ ಚಟರ್ಜಿ ವಾಪಸಾಗಿದ್ದಾರೆ. ತಂಡವನ್ನು ಅನುಸ್ತೂಪ್‌ ಮಜುಮ್ದಾರ್‌ ಮುನ್ನಡೆಸಲಿದ್ದಾರೆ. ಮೊಹಮ್ಮದ್‌ ಶಮಿ 2023ರ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಕೊನೆಯ ಸಲ ಭಾರತವನ್ನು ಪ್ರತಿನಿಧಿಸಿದ್ದರು. ಬಳಿಕ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

Advertisement

ರಣಜಿಗೆ ಸರ್ಫರಾಜ್‌ ಅಲಭ್ಯ

ಮುಂಬಯಿ: ಶುಕ್ರವಾರ ಆರಂಭಗೊಳ್ಳಲಿರುವ ರಣಜಿ ಟ್ರೋಫಿ ಎಲೈಟ್‌ ಪಂದ್ಯಗಳಿಗೆ ಮುಂಬಯಿಯ ಪ್ರಮುಖ ಬ್ಯಾಟರ್‌ ಸರ್ಫರಾಜ್‌ ಖಾನ್‌ ಲಭ್ಯರಾಗುತ್ತಿಲ್ಲ. ಅ. 16ರಂದು ಮೊದಲ್ಗೊಳ್ಳಲಿರುವ ನ್ಯೂಜಿಲ್ಯಾಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಸರ್ಫರಾಜ್‌ ಆಡುವ ಸಾಧ್ಯತೆಯಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next