Advertisement

BJP-AIADMK: ಬ್ರೇಕಪ್‌ಗೆ ಅವಮಾನ ಕಾರಣ!

11:46 PM Sep 26, 2023 | Team Udayavani |

ತಮಿಳುನಾಡಿನ ಎಐಎಡಿಎಂಕೆ ಪಕ್ಷವು ಏಕಾಏಕಿ ಎನ್‌ಡಿಎಗೆ ಗುಡ್‌ಬೈ ಹೇಳಲು “ಸೀಟು ಹಂಚಿಕೆ’ ವಿಚಾರದಲ್ಲಾದ ಮನಸ್ತಾಪವೇ ಕಾರಣ ಎಂದು ಎಲ್ಲರೂ ಊಹಿಸಿದ್ದರು. ಆದರೆ, ನೈಜ ಕಾರಣ ಬೇರೆನೇ ಇದೆ ಎನ್ನುತ್ತಿವೆ ಮೂಲಗಳು. ಎಐಎಡಿಎಂಕೆ ನಾಯಕರಿಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈಗೂ ಹಿಂದಿನಿಂದಲೂ ಆಗಿಬರುತ್ತಿಲ್ಲ. ಕಳೆದ ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿಯಾಗಿದ್ದ ಎಐಎಡಿಎಂಕೆ ಹಿರಿಯ ನಾಯಕರು, “ರಾಜ್ಯಾಧ್ಯಕ್ಷ ಸ್ಥಾನದಿಂದ ಅಣ್ಣಾಮಲೈ ಅವರನ್ನು ಕಿತ್ತುಹಾಕಬೇಕು’ ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದರಂತೆ.

Advertisement

ಆದರೆ, ಅದಕ್ಕೆ ನಡ್ಡಾ ಸುತಾರಾಂ ಒಪ್ಪಿರಲಿಲ್ಲ. ಇದರಿಂದ ತೀವ್ರ ಮುಜುಗರ ಅನುಭವಿಸಿದ ಎಐಎಡಿಎಂಕೆ ನಾಯಕರು, “ಅವಮಾನ’ ಸಹಿಸಿಕೊಳ್ಳಲಾಗದೇ ಎನ್‌ಡಿಎಯಿಂದ ಹೊರಬರುವುದಾಗಿ ಘೋಷಿಸಿಯೇ ಬಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next