Advertisement
ತಮಿಳುನಾಡು ಕೇಡರ್ನ 1980ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ದಾಸ್ ಅವರು 2015ರಿಂದ 2017ರ ಮೇವರೆಗೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ಬಳಿಕ ಅವರನ್ನು ಭಾರತದ ಜಿ-20 ಶೆರ್ಪಾ ಆಗಿನೇಮಕ ಮಾಡಲಾಗಿತ್ತು. ಅಲ್ಲದೆ 15ನೇ ಹಣಕಾಸು ಆಯೋಗದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇತಿಹಾಸ ಪದವಿ ಪಡೆದಿರುವ ದಾಸ್ ಅವರು 2014ರಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರಕಾರ ಅಧಿಕಾರಕ್ಕೇರಿದ ಕೂಡಲೇ ಕೇಂದ್ರ ವಿತ್ತ ಸಚಿವಾಲಯವನ್ನು ಪ್ರವೇಶಿಸಿದ್ದರು.
ಶಕ್ತಿಕಾಂತ್ ದಾಸ್ ಅವರು ಅನುಭವಿ ಅಧಿಕಾರಿಯಾಗಿದ್ದು, ಆಡಳಿತಾರೂಢ ಎನ್.ಡಿ.ಎ. ಹಾಗೂ ಹಿಂದಿನ ಯುಪಿಎ ಅವಧಿಯಲ್ಲೂ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಅವರಿಗಿದೆ. ಇವರ ನೇಮಕವು ಷೇರು ಮಾರುಕಟ್ಟೆಯಲ್ಲೂ ಚೇತರಿಕೆ ಉಂಟುಮಾಡುವ ನಿರೀಕ್ಷೆಯಿದೆ. ಏಕೆಂದರೆ ಆರ್ಬಿಐ ಹಾಗೂ ಕೇಂದ್ರ ಸರಕಾರದ ನಡುವಿನ ತಿಕ್ಕಾಟವು ಶಮನವಾಗಬೇಕೆಂಬುದೇ ಹೂಡಿಕೆದಾರರ ಆಶಯವಾಗಿದೆ. ದಾಸ್ ನೇಮಕದಿಂದ ಈ ತಿಕ್ಕಾಟಕ್ಕೆ ತೆರೆಬೀಳುವ ಆಶಾಭಾವ ಮೂಡಿದೆ ಎನ್ನುತ್ತಾರೆ ಡಿಬಿಎಸ್ ಬ್ಯಾಂಕ್ ಕಾರ್ಯಕಾರಿ ನಿರ್ದೇಶಕ ಆಶಿಷ್ ವೈದ್ಯ.