Advertisement

ಕೆಕೆಆರ್‌ ಕ್ರಿಕೆಟಿಗರ ಪರಿಸರ ಕಾಳಜಿ: ಗಿಡ ನೆಡುವ ಯೋಜನೆ

03:25 AM May 29, 2020 | Sriram |

ಕೋಲ್ಕತಾ: ಐಪಿಎಲ್‌ ಅನಿಶ್ಚಿತತೆಯ ನಡುವೆಯೂ ಕೋಲ್ಕತಾ ನೈಟ್‌ರೈಡರ್ ತಂಡ ಬೇರೊಂದು ಕಾರಣದಿಂದ ಸುದ್ದಿಯಾಗಿದೆ. ಇತ್ತೀಚೆಗಷ್ಟೇ ಅಂಫಾನ್‌ ಚಂಡಮಾರುತದಿಂದ ತತ್ತರಿಸಿದ ಕೋಲ್ಕತಾದಲ್ಲಿ 5 ಸಾವಿರ ಗಿಡಗಳನ್ನು ನೆಡಲು ಫ್ರಾಂಚೈಸಿ ಮುಂದಾಗಿದೆ. ಇದು ಕೆಕೆಆರ್‌ ಕ್ರಿಕೆಟಿಗರ ಪರಿಸರ ಕಾಳಜಿಗೆ ಸಾಕ್ಷಿಯಾಗಿದೆ.

Advertisement

ಸ್ಥಳೀಯ ಆಡಳಿತದೊಂದಿಗೆ ಕೈ ಜೋಡಿಸಿ ಕೋಲ್ಕತಾದ ವಿವಿಧ ಭಾಗಗಳಲ್ಲಿ ಸುಮಾರು 5 ಸಾವಿರದಷ್ಟು ಗಿಡಗಳನ್ನು ನೆಡುವುದು ನಮ್ಮ ಯೋಜನೆಯಾಗಿದೆ ಎಂಬ ಫ್ರಾಂಚೈಸಿಯ ಹೇಳಿಕೆಯನ್ನು “ಫ‌ಸ್ಟ್‌ ಪೋಸ್ಟ್‌’ ಪ್ರಕಟಿಸಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೊಡ್ಡ ಮೊತ್ತವೊಂದನ್ನು ನೀಡುವುದು ಕೂಡ ಕೆಕೆಆರ್‌ ಫ್ರಾಂಚೈಸಿಯ ಯೋಜನೆಗಳಾಗಿವೆ.

 

Advertisement

Udayavani is now on Telegram. Click here to join our channel and stay updated with the latest news.

Next