Advertisement

ದೀಪಾರಾಧನೆಗೆ ಶಬರಿಮಲೆಯ ಬಾಗಿಲು ತೆರೆಯಿತು

09:11 AM Jan 16, 2020 | sudhir |

ಶಬರಿಮಲೆ : ಕಲಿಯುಗವರದ ಕಾನನವಾಸ ಸ್ವಾಮಿ ಅಯ್ಯಪ್ಪ ನೆಲೆಯಾಗಿರುವ ಶಬರಿಮಲೆಯಲ್ಲಿ ಮಕರ ಸಂಕ್ರಮಣದ ದೀಪಾರಾಧನೆಗಾಗಿ ಇದೀಗ 5 ಗಂಟೆಗೆ ಬಾಗಿಲು ತೆರೆಯಿತು.

Advertisement

ಇಂದು ಜ.15 ರ ಬುಧವಾರ ಬೆಳಗ್ಗೆ 2.09ಕ್ಕೆ ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಮಣ ಪೂಜೆ ಹಾಗೂ ಸಂಕ್ರಮಣ ಅಬಿಷೇಕ ನಡೆದ ಬಳಿಕ ಹರಿವರಾಸನಂ ಹಾಡಿನೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚಲಾಗಿತ್ತು.

ಹೀಗೆ ಬಾಗಿಲು ಮುಚ್ಚಿದ ದೇವಸ್ಥಾನದ ಬಾಗಿಲು ಈಗ ತೆರೆದುಕೊಂಡಿದೆ.
ಸಂಜೆ 6 ಗಂಟೆ ವೇಳೆಗೆ ತಿರುವಾಭರಣ ಸನ್ನಿಧಾನಕ್ಕೆ ಬರಲಿದೆ.ಬಳಿಕ ದೀಪಾರಾಧನೆ ನಡೆಯಲಿದೆ. ನಂತರ ಮಕರಜ್ಯೋತಿ‌ ದರ್ಶನವಾಗಲಿದೆ.

– ಪ್ರವೀಣ್ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next