Advertisement

ನಾಲ್ವರು ಪೊಲೀಸರ ಸಾವಿಗೆ ಕಾರಣರಾದ ಏಳು ನಕ್ಸಲರ ಬಂಧನ

09:39 AM Jan 08, 2020 | keerthan |

ಲಾತೆಹರ್ (ಜಾರ್ಖಂಡ್): ಚಾಂಡ್ವದಲ್ಲಿ ನವೆಂಬರ್ 22ರಂದು ನಡೆದ ದಾಳಿಗೆ ಕಾರಣ ಎಂದು ಆರೋಪಿಸಲಾಗಿರುವ ಏಳು ನಕ್ಸಲರನ್ನು ಲಾತೆಹರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

Advertisement

ಈ ಕೆಂಪು ಉಗ್ರರು ನವೆಂಬರ್ 22ರಂದು ನಡೆದ ಚಾಂಡ್ವ ದಾಳಿಯಲ್ಲಿ ಭಾಗಿಯಾಗಿ ನಾಲ್ವರು ಪೊಲೀಸರ ಸಾವಿಗೆ ಕಾರಣರಾಗಿದ್ದರು ಎಂದು ಡಿಐಜಿ ಅಮೋಲ್ ಹೋಂಕಾರ್ ವೇಣುಕಾಂತ್ ಹೇಳಿದ್ದಾರೆ.

ಶನಿವಾರ ಜಾರ್ಖಂಡ್ ನ ತಿತಿರ್ ಅರಣ್ಯ ಪ್ರದೇಶದ ಬಾಲುನಾತ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ವರು ನಕ್ಸಲರನ್ನು ಬಂಧಿಸಲಾಗಿತ್ತು.

ತೃತೀಯ ಪ್ರಸ್ತುತಿ ಕಮಿಟಿ ಎಂಬ ನಕ್ಸಲ್ ಸಂಘಟನೆ ಸಂಚರಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಎಸ್ ಪಿ ಪ್ರಶಾಂತ್ ಆನಂದ್ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next