Advertisement

ಬಿಹಾರ ದೇವಳದಿಂದ 7 ಅಷ್ಟಧಾತು ವಿಗ್ರಹಗಳ ಕಳ್ಳತನ; ತನಿಖೆ

11:24 AM Apr 13, 2018 | Team Udayavani |

ಸಮಷ್ಟೀಪುರ, ಬಿಹಾರ: ಬಿಹಾರದ ನರಘೋಗ  ದೇವಸ್ಥಾನದಿಂದ  ಏಳು ಅಷ್ಟಧಾತು ವಿಗ್ರಹಗಳನ್ನು ಕಳ್ಳರು ಕದ್ದೊಯ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ರಾಮ ಜಾನಕೀ ಮಠ ದೇವಳದಲ್ಲಿ ಈ ಕಳ್ಳತನ ನಡೆದ ಸುದ್ದಿ ತಿಳಿದೊಡನೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ದೀಪಕ್‌ ರಂಜನ್‌ ತಿಳಿಸಿದ್ದಾರೆ. 

ಎಂಟು ಅಮೂಲ್ಯ ಲೋಹಗಳಿಂದ ತಯಾರಿಸಲಾದ ಅಷ್ಟಧಾತು ವಿಗ್ರಹಗಳ ಕಳ್ಳತನ ಪ್ರಕರಣದಲ್ಲಿ ದೇವಳದ ಮುಖ್ಯ ಅರ್ಚಕ ಮತ್ತು ಭದ್ರತೆಗೆಂದು ನಿಯೋಜಿಸಲ್ಪಟ್ಟಿದ್ದ ಹೋಮ್‌ ಗಾರ್ಡ್‌ ಪಾತ್ರ ಇರುವ ಶಂಕೆಯಲ್ಲಿ ಅವರನ್ನು ಪ್ರಶ್ನಿಸಲಾಗುತ್ತಿದೆ ಎಂದವರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next