ಮಂಗಳೂರು: ಬೀದರ್ ಮತ್ತು ತೆಲಂಗಾಣದಿಂದ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಪತ್ತೆ ಮಾಡಿರುವ ಪೊಲೀಸರು ಎರಡು ಪ್ರಕರಣಗಳಲ್ಲಿ ಸುಮಾರು 44 ಕೆ.ಜಿ ಗಾಂಜಾ ಸಹಿತ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸುದ್ದಿಗೋಷ್ಟಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು.
ಬೀದರ್ ಮತ್ತು ತೆಲಂಗಾಣದಿಂದ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತ ಪಡೆದ ಸಿಸಿಬಿ ಪೊಲೀಸರು, ಉಳ್ಳಾಲ ಮತ್ತು ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ದರು. ಎರಡು ಕಾರುಗಳಲ್ಲಿ ಸಾಗಾಟ ಮಾಡುತ್ತಿದ್ದ40 ಕೆ.ಜಿ ಗಾಂಜಾ ವಶಕ್ಕೆ ಪಡೆದಿದು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಹುಣಸೂರು: ಬಸ್ ಚಾಲಕನ ಮೇಲೆ ಯುವಕನಿಂದ ಮಾರಣಾಂತಿಕ ಹಲ್ಲೆ!
ಆರೋಪಿಗಳನ್ನು ನರಿಂಗಾನ ತೌಡುಗೋಳಿಯ ಅಬ್ದುಲ್ ಅಜೀಜ್ (40), ಮೊಯ್ದಿನ್ ಹಫೀಸ್ ಯಾನೆ ಅಬಿ (24), ತೆಲಂಗಾಣ ಸಂಗಾರೆಡ್ಡಿ ಜಿಲ್ಲೆಯ ವಿಠಲ್ ಚವ್ಹಾಣ್ (35), ಬೀದರ್ ನ ಬಾಲ್ಕಿ ತಾಲೂಕಿನ ಸಂಜುಕುಮಾರ್ (34) ಮತ್ತು ಕಲ್ಲಪ್ಪ (40) ರನ್ನು ಬಂಧಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಸ್ಕೂಟರ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಅವರಿಂದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನರಿಂಗಾನದ ಮೊಹಮ್ಮದ್ ಹಫೀಜ್ (23) ಮತ್ತು ಗುರುಪುರದ ಸಂದೀಪ್ (34) ಎಂದು ಗುರುತಿಸಲಾಗಿದೆ.