Advertisement

ಸಲ್ಲೂಗೆ ಜೈಲೋ, ಜಾಮೀನೋ? ಇಂದು ಜಾಮೀನು ಅರ್ಜಿಯ ವಿಚಾರಣೆ 

05:45 AM Apr 07, 2018 | Team Udayavani |

ಜೋಧ್‌ಪುರ: ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ 5 ವರ್ಷಗಳ ಜೈಲು ಶಿಕ್ಷೆಗೊಳಗಾಗಿರುವ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಜಾಮೀನು ಅರ್ಜಿಯ ವಿಚಾರಣೆ, ಶನಿವಾರವೂ ಮುಂದುವರಿಯಲಿದೆ. ಇಲ್ಲಿನ ಸ್ಥಳೀಯ ನ್ಯಾಯಾಲಯದಲ್ಲಿ ಶುಕ್ರವಾರ ಆರಂಭಗೊಂಡ ವಿಚಾರಣೆ ವೇಳೆ, ಭಾರೀ ವಾದ, ಪ್ರತಿವಾದಗಳು ನಡೆದ ಅಂತಿಮ ನಿರ್ಧಾರಕ್ಕೆ ಅವಕಾಶವಾಗದ ಕಾರಣ, ವಿಚಾರಣೆಯನ್ನು ನ್ಯಾಯಾಧೀಶರು ಶನಿವಾರ ಬೆಳಗ್ಗೆಗೆ ಮುಂದೂಡಿದ್ದಾರೆ. ಸಲ್ಲು ಜೈಲಿನಲ್ಲೇ ಉಳಿಯಬೇಕೋ, ಜಾಮೀನಿನಲ್ಲಿ ಹೊರಬರಬೇಕೋ ಎಂಬುದು ಶನಿವಾರ ನಿರ್ಧಾರವಾಗಲಿದೆ.

Advertisement

1998ರಲ್ಲಿ ರಾಜಸ್ಥಾನದ ಜೋಧಪುರ ಬಳಿ ಕೃಷ್ಣ ಮೃಗಗಳ ಬೇಟೆ ಪ್ರಕರಣಕ್ಕೆ ಸಂಬಂಧಿಸಿ, ಜೋಧ್‌ಪುರ ನ್ಯಾಯಾಲಯ, ಗುರುವಾರ ಖಾನ್‌ ಗೆ 5 ವರ್ಷಗಳ ಜೈಲು ಹಾಗೂ 10,000 ದಂಡ ವಿಧಿಸಿತ್ತು. ತೀರ್ಪಿನ ಬೆನ್ನಲ್ಲೇ ಅವರನ್ನು ಜೈಲಿಗೆ ರವಾನಿಸಲಾಗಿತ್ತು. ಶುಕ್ರವಾರದ ವಿಚಾರಣೆ ವೇಳೆ, ಸಲ್ಮಾನ್‌ ಪರ ವಕೀಲರು, 1998ರ ಪ್ರಕರಣದಲ್ಲಿಯೂ ಅವರು ಶಸ್ತ್ರಾಸ್ತ್ರ ಬಳಸಿದ್ದಕ್ಕೆ ಯಾವುದೇ ಪುರಾವೆಯಿಲ್ಲ. ತನಿಖೆಯಲ್ಲಿ ಸಾಕಷ್ಟು ಲೋಪಗಳಾಗಿವೆ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು ನಂಬುವಂತೆ ಇಲ್ಲ ಎಂದು ವಾದಿಸಿದರು. ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದ್ದಾರೆ.

ನಜ್ಮಾ ಹೆಫ್ತುಲ್ಲಾ ಕಿಡಿ
ಸಲ್ಮಾನ್‌ ಖಾನ್‌ ಓರ್ವ ಮುಸ್ಲಿಂ ಆಗಿದ್ದಕ್ಕೆ ಆತನಿಗೆ ಶಿಕ್ಷೆ ವಿಧಿಸಲಾಗಿದೆ ಎಂಬ ಪಾಕಿಸ್ಥಾನ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಹೇಳಿಕೆಯನ್ನು ಮಣಿಪುರದ ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ತೀವ್ರವಾಗಿ ಖಂಡಿಸಿದ್ದಾರೆ. ಪಾಕಿಸ್ಥಾನದ ಸಚಿವರಿಗೆ ಭಾರತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸುವ ಅಗತ್ಯತೆಯಿಲ್ಲ ಎಂದಿರುವ ಅವರು, ಭಾರತದಲ್ಲಿ ಜಾತಿ, ಮತಗಳ ಹೊರತಾಗಿ ವಿಚಾರಣೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಪದ್ಧತಿಯಿದೆ. ಇಲ್ಲಿ, ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂಬ ಭೇದಭಾವ ಇಲ್ಲ. ಸಲ್ಮಾನ್‌ ಖಾನ್‌ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗುತ್ತದಷ್ಟೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next