Advertisement

ಸರ್ವರ್‌ ತೊಂದರೆ: ಎಪಿಎಂಸಿ ವಹಿವಾಟು ಮಂದ

04:39 PM Apr 18, 2018 | Team Udayavani |

ಹುಬ್ಬಳ್ಳಿ: ಮುಂಬಯಿಯ ಸರ್ವರ್‌ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇಬಲ್‌ ವೈರ್‌ಗಳು ಸುಟ್ಟಿದ್ದರಿಂದ ಸೋಮವಾರದಿಂದಲೇ ಸರ್ವರ್‌ ಡೌನ್‌ ಆಗಿದ್ದು, ಹೀಗಾಗಿ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಗಳವಾರವೂ ಟೆಂಡರ್‌ ಪ್ರಕ್ರಿಯೆ ತುಂಬಾ ಮಂದಗತಿಯಲ್ಲಿ ನಡೆಯಿತು.

Advertisement

ವ್ಯಾಪಾರಸ್ಥರು ತಮ್ಮ ವಹಿವಾಟನ್ನು ಆನ್‌ಲೈನ್‌ ಮುಖಾಂತರವೇ ನಡೆಸುತ್ತಿದ್ದು, ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದರೆ ಆನ್‌ಲೈನ್‌ ಮುಖ್ಯ. ಆದರೆ ಸೋಮವಾರ ಬೆಳಗ್ಗೆಯಿಂದಲೇ ಸರ್ವರ್‌ ಕೈಕೊಟ್ಟಿದ್ದರಿಂದ ಟೆಂಡರ್‌ ಪ್ರಕ್ರಿಯೆ ನಡೆಸಲು ಹಾಗೂ ವ್ಯಾಪಾರಸ್ಥರು ವಹಿವಾಟು ಮಾಡಿದ ಸರಕಿಗೆ ಪರವಾನಗಿ ಕೊಡುವುದು ಎಪಿಎಂಸಿ ಸಿಬ್ಬಂದಿಗೆ ತೀವ್ರ ಸಮಸ್ಯೆ ಆಯಿತು. ಹೀಗಾಗಿ ಹೇಗಾದರೂ ವಹಿವಾಟು ಪ್ರಕ್ರಿಯೆ ಮುಂದುವರಿಸಲು ಸಾಮಗ್ರಿಗಳ ಕೈಪಿಡಿಯ ಪಟ್ಟಿ ಸಿದ್ಧಪಡಿಸಿ ಆ ಮೂಲಕ ಪರವಾನಗಿ ನೀಡಲು ಮುಂದಾದರು. ಎಪಿಎಂಸಿಯ ಎಲ್ಲ ಗೇಟ್‌ಗಳಲ್ಲಿ ಸಿದ್ಧಪಡಿಸಿದ ಕೈಪಿಡಿಗಳನ್ನು ರವಾನಿಸಿ ವಹಿವಾಟು ಪ್ರಕ್ರಿಯೆಗೆ ಅನುಕೂಲ ಮಾಡಿದರು.

ಸರ್ವರ್‌ ತುಂಬಾ ಮಂದಗತಿಯಲ್ಲಿದ್ದ ಕಾರಣ ಟೆಂಡರ್‌ನಲ್ಲಿ ವಹಿವಾಟು ಆದ ದಾಖಲೆಗಳನ್ನು ಸಿಬ್ಬಂದಿಯು ನಮೂದಿಸಿ ವಹಿವಾಟು ಪ್ರಕ್ರಿಯೆ ನಡೆಸಿದರು. ಸರ್ವರ್‌ ಡೌನ್‌ ಆಗಿದ್ದರಿಂದ ವ್ಯಾಪಾರಸ್ಥರು ವಹಿವಾಟು ನಡೆಸಲು ಪರದಾಟಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next