Advertisement

Server Problem: ಗೃಹಬಳಕೆ ಅಡುಗೆ ಅನಿಲ ಪೂರೈಕೆ ವ್ಯತ್ಯಯ

01:53 AM Sep 18, 2024 | Team Udayavani |

ಉಡುಪಿ: ಕರಾವಳಿ ಜಿಲ್ಲೆಯ ವಿವಿಧೆಡೆ ಗೃಹಬಳಕೆಯ ಗ್ಯಾಸ್‌ ಪೂರೈಕೆಯಲ್ಲಿ ಕೆಲವು ದಿನಗಳಿಂದ ವ್ಯತ್ಯಯ ಉಂಟಾಗುತ್ತಿದೆ. ಎಚ್‌ಪಿಸಿಎಲ್‌, ಬಿಪಿಸಿಎಲ್‌ನಲ್ಲಿ ಸಿಬಂದಿ ಕೊರತೆ ಹಾಗೂ ಸರ್ವರ್‌ ಸಮಸ್ಯೆಯಿಂದ ಈ ಸಮಸ್ಯೆ ಕಂಡು ಬಂದಿದ್ದು, ಇದರಿಂದಾಗಿ ಉಡುಪಿ, ದ.ಕ., ಕೊಡಗು, ಶಿವಮೊಗ್ಗ ಹಾಗೂ ಕೇರಳದ 4 ಜಿಲ್ಲೆಗಳಲ್ಲಿ ಗ್ಯಾಸ್‌ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದೆ.

Advertisement

ಕೇಂದ್ರ ಕಚೇರಿಯಲ್ಲಿ ಗ್ಯಾಸ್‌ ಪೂರೈಕೆ 1 ದಿನ ವಿಳಂಬವಾದರೆ 100ರಿಂದ 150 ಟ್ರಕ್‌ಗಳ ಓಡಾಟದಲ್ಲಿ ವ್ಯತ್ಯಯವಾಗುತ್ತದೆ. ಬುಕಿಂಗ್‌ ಮಾಡಿದವರು 10ರಿಂದ 20 ದಿನಗಳಷ್ಟು ಕಾಲ ಕಾಯುವ ಸ್ಥಿತಿಯೂ ಎದುರಾಗಿದೆ. ಈ ನಡುವೆ ಬುಕಿಂಗ್‌ ಮಾಡುವಾಗ ಪುಸ್ತಕ ಸಂಖ್ಯೆ ಸಹಿತ ಹಲವರು ವಿವರಗಳನ್ನು ನೀಡಬೇಕಿರುವ ಕಾರಣ ಕೆಲವೊಂದು ಬಾರಿ ತಾಂತ್ರಿಕ ಸಮಸ್ಯೆಗಳು ಗ್ರಾಹಕರಿಗೆ ಎದುರಾಗುತ್ತಿವೆ. ಇದನ್ನು ಸರಿದೂಗಿಸಲು ಇನ್ನೂ ಕೆಲವು ದಿನಗಳು ಬೇಕಾಗಬಹುದು ಎಂಬುದು ಪೂರೈಕೆದಾರರ ಅನಿಸಿಕೆ.

ವಾರದ ಹಿಂದೆ ಹೆಚ್ಚಿನ ಕಡೆಗಳಲ್ಲಿ ಈ ಸಮಸ್ಯೆ ಎದುರಾಗಿತ್ತು. ಈಗ ಹಂತಹಂತವಾಗಿ ಈ ಸಮಸ್ಯೆಯನ್ನು ನೀಗಿಸಲಾಗಿದೆ ಎನ್ನುತ್ತಾರೆ ಪೂರೈಕೆದಾರರಾದ ರಾಹುಲ್‌. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗುತ್ತಿರುವ ಕಾರಣ ಇದರ ಪೂರೈಕೆಯಲ್ಲಿ ಇದುವರೆಗೂ ಯಾವುದೇ ವ್ಯತ್ಯಯ ಕಂಡುಬಂದಿಲ್ಲ.

ಒಟಿಪಿ ಕಡ್ಡಾಯ
ಪೈಲಟ್‌ ಯೋಜನೆಯಾಗಿ ಒಟಿಪಿ ಕಡ್ಡಾಯಗೊಳಿಸುವುದನ್ನು ಜಾರಿ ಮಾಡುತ್ತಿದ್ದೇವೆ. ಪಾರದರ್ಶಕತೆಗಾಗಿ ಹಾಗೂ ಸಿಲಿಂಡರ್‌ ಪೂರೈಕೆಯ ದೃಢೀಕರಣಕ್ಕಾಗಿ ಗ್ರಾಹಕರ ಮೊಬೈಲ್‌ ಸಂಖ್ಯೆಗೆ ಬರುವ ಒಟಿಪಿ ನಂಬರ್‌ ಅನ್ನು ಡೆಲಿವರಿ ಸಿಬಂದಿಗೆ ಕೊಡುವುದು ಕಡ್ಡಾಯವಾಗಿದೆ. ಗ್ರಾಹಕರು ಮೊಬೈಲ್‌ ಸಂಖ್ಯೆಯನ್ನು ಬದಲಾಯಿಸಬೇಕಾದಲ್ಲಿ ತಮ್ಮ ಏಜೆನ್ಸಿಗೆ ಗ್ಯಾಸ್‌ ಪಾಸ್‌ಬುಕ್‌ನೊಂದಿಗೆ ತೆರಳಿ ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಉಡುಪಿ ಎಚ್‌ಪಿ ಗ್ಯಾಸ್‌ ಏಜೆಂಟ್‌ ರಾಘವೇಂದ್ರ ಆಚಾರ್ಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next