Advertisement

ಪ್ರತ್ಯೇಕ ಅವಘಡ: ಸಿಡಿಲು ಬಡಿದು ಇಬ್ಬರ ದುರ್ಮರಣ

12:19 AM Apr 12, 2019 | Sriram |

ಬೆಂಗಳೂರು: ರಾಜ್ಯದ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ಅವಘಡದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ಅಮೀನಗಢ ಸಮೀಪದ ಐಹೊಳೆ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದ ವೇಳೆ ಸಿಡಿಲು ಬಡಿದು ರೋಣ ತಾಲೂಕಿನ ಕುರಹಟ್ಟಿ ಗ್ರಾಮದ ರಾಮವ್ವ (35)ಮೃತಪಟ್ಟಿದ್ದಾರೆ.

Advertisement

ಹನಮಪ್ಪ ದಳವಾಯಿ ಪತ್ನಿಯಾದ ರಾಮವ್ವ, ಐಹೊಳೆ ಗ್ರಾಮದಲ್ಲಿದ್ದ ತವರು ಮನೆಗೆ ಆಗಮಿಸಿದ್ದರು. ರಾಮವ್ವ ಜತೆಗಿದ್ದ ಮೂವರು ಮಹಿಳೆಯರಿಗೆ ಸಣ್ಣಪುಟ್ಟ
ಗಾಯಗಳಾಗಿವೆ. ಅಮೀನಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಣಸಗಿಯ ಕೊಡೇಕಲ್‌ ಪಟ್ಟಣದ ಯುಕೆಪಿ ಕ್ಯಾಂಪ್‌ ಪಕ್ಕದಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು ದೇವಿಂದ್ರಪ್ಪ ಲಕ್ಕುಂಡಿ ಹಡಪದ (58) ಮೃತಪಟ್ಟಿದ್ದಾರೆ.

ಬುಧವಾರ ರಾತ್ರಿ ಜಮೀನಿನಲ್ಲಿರುವ ಮನೆ ಮುಂಭಾಗದಲ್ಲಿ ಆಡು ಮರಿಯನ್ನು ದೊಡ್ಡಿಗೆ ಸಾಗಿಸುವ ವೇಳೆ ಭಾರೀ ಮಳೆಯೊಂದಿಗೆ ಸಿಡಿಲು ಬಡಿದು ದೇವೇಂದ್ರಪ್ಪ ಹಾಗೂ ಆಡು ಮರಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.


Advertisement

Udayavani is now on Telegram. Click here to join our channel and stay updated with the latest news.

Next