Advertisement

ತುಮಕೂರು ಜಿಲ್ಲೆಯಲ್ಲಿ ಪ್ರತ್ಯೇಕ 2 ಅಪಘಾತ 8 ಸಾವು

03:09 PM Jul 05, 2018 | Team Udayavani |

ತುಮಕೂರು: ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಅಪಘಾತದಲ್ಲಿ 8 ಜನ ಮೃತಪಟ್ಟಿದ್ದು ಜಿಲ್ಲೆಯ ಪಾಲಿಗೆ ಬುಧವಾರ ಕರಾಳ ಬುಧವಾರವಾಗಿದ್ದು. ಗೆಳೆಯನ ಮದುವೆ ನಿಶ್ಚಿತಾರ್ಥಕ್ಕೆ ಸಂತಸದಿಂದ ಪಾವಗಡಕ್ಕೆ ಹೋಗಿ ಬೆಂಗಳೂರಿಗೆ ವಾಪಸಾಗುವಾಗ ಲಾರಿಗೆ ಕಾರು ಅಪ್ಪಳಿಸಿದ ಪರಿಣಾಮ ಸ್ಥಳದಲ್ಲಿಯೇ 5 ಜನ ಮೃತಪಟ್ಟಿದ್ದಾರೆ. ಮತ್ತೂಂದು ಪ್ರಕರಣದಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದು 3 ಜನ ದುರ್ಮರಣ ಹೊಂದಿದ್ದು ಜಿಲ್ಲೆಯಲ್ಲಿ ಒಟ್ಟು 8 ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Advertisement

ಭೀಕರ ಅಪಘಾತದಲ್ಲಿ ಐದು ಸಾವು: ಕಾರು ಮತ್ತು ಸಿಮೆಂಟ್‌ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಐದು ಜನರು ದಾರಣವಾಗಿ ಮೃತಪಟ್ಟಿರುವ ಘಟನೆ ಮಧುಗಿರಿ ಸಮೀಪದ ಕರೆಗಳ ಪಾಳ್ಯದಲ್ಲಿ ಬುಧವಾರ ಸಂಜೆ ನಡೆಸಿದೆ. 

ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಯಿಂದ ಪಾವಗಡದಲ್ಲಿ ನಡೆಯುತ್ತಿದ್ದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರೊಂದಿಗೆ ಬೆರೆತು ಸಂತಸ ಸಂಭ್ರಮ ಪಟ್ಟು ಸಂಜೆಯವರೆಗೂ ಗೆಳೆಯರು ಕುಟುಂಬಸ್ಥರೊಂದಗೆ ಇದ್ದು ನಂತರ ಪಾವಗಡದಿಂದ ಬೆಂಗಳೂರಿಗೆ ವಾಪಸಾಗುವಾಗ ಸಂಜೆ 5.30 ರ ಸಮಯದಲ್ಲಿ ಎದುರಿಗೆ ಬರುತ್ತಿದ್ದ ಸಿಮೆಂಟ್‌ ಲಾರಿಗೆ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ವಾಸಿಗಳಾದ ಮುರುಳಿ (20), ರಾಮ್‌ ಮೋಹನ್‌ (23), ಮಂಜುನಾಥ್‌ (24), ಶಿವಪ್ರಸಾದ್‌(25) ದಿನೇಶ್‌ (24) ಸ್ಥಳದಲ್ಲಿಯೇ ಮೃತಪಟ್ಟ ದುದೈವಿಗಳಾಗಿದ್ದಾರೆ.

ಹೆದ್ದಾರಿಯಲ್ಲಿ ಅಪಘಾತವಾಗಿ ಐದು ಜನ ಮೃತಪಟ್ಟಿರುವ ಸುದ್ದಿ ಹರಡಿ ಸುತ್ತ ಮುತ್ತಲ ಜನ ಸೇರಿ ನೋಡಿದರೆ ಐವರು ಮೃತಪಟ್ಟಿದ್ದರು ತಕ್ಷಣವೇ ಮಧುಗಿರಿ ಪೊಲೀಸ್‌ ಠಾಣೆಗೆ ನಾಗರೀಕರು ಸುದ್ದಿ ಮುಟ್ಟಿಸಿದ ತಕ್ಷಣ ಕೂಡಲೇ ಸ್ಥಳಕ್ಕೆ ಮಧಗಿರಿ ಪೊಲೀಸರು ಬಂದು ಪ್ರಕರಣ ದಾಖಲಿಸಿಕೊಂಡು
ಮುಂದಿನ ಕ್ರಮ ಕೈಗೊಂಡಿದ್ದಾರೆ.

ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಮೂರು ಸಾವು: ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ದ್ವಿಚಕ್ರ ವಾಹನಕ್ಕೆ ಮುಖಾ ಮುಖೀಯಾಗಿ ಅಪ್ಪಳಿಸಿದ ಪರಿಣಾಮ ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬುಧವಾರ ಬೆಳಗಿನ ಜಾವ ಜಿಲ್ಲೆಯ ಗುಬ್ಬಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ತುಮಕೂರು ನಗರದ ವಾಸಿಗಳಾದ ಇರ್ಫಾನ್‌ (28), ಆಸ್ಕರ್‌ (26) ಹಾಗೂ ಸೈಯದ್‌ ಇರ್ಫಾನ್‌ (30) ಈ ಮೂವರು ತುಮಕೂರಿನಲ್ಲಿ ಮೆಕಾನಿಕ್‌ ಕೆಲಸ ಮಾಡುತ್ತಿದ್ದು ಕಳೆದ ರಾತ್ರಿ ಗುಬ್ಬಿ ಸಮೀಪದಲ್ಲಿ ಕಾರೊಂದು ಕೆಟ್ಟಿದೆ ಎಂದು ದೂರವಾಣಿ ಬಂದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನದಲ್ಲಿ ಮೂವರು ಕಾರು ರಿಪೇರಿಗಾಗಿ ಹೋಗಿದ್ದರು ಎಂದು ತಿಳಿದು ಬಂದಿದೆ.

ಕಾರು ರಿಪೇರಿ ಮಾಡಿ ಪುನಃ ತುಮಕೂರು ಕಡೆ ಬರುವಾಗ ಗುಬ್ಬಿ ತಾಲೂಕಿನ ಬೆಣಚಿಗೆರೆ ಗೇಟ್‌ ಬಳಿ ಅತಿ ವೇಗವಾಗಿ ಎದುರಿಗೆ ಬಂದ ಕಾರು ಬೈಕ್‌ಗೆ ಮುಖಮುಖೀಯಾಗಿ ಅಪ್ಪಳಿಸಿದ್ದರಿಂದ ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನೆಯ ಸುದ್ದಿ ತಿಳಿದ ಕೂಡಲೇ ಗುಬ್ಬಿ ಪೊಲೀಸರು ಸ್ಥಳಕ್ಕೆಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ ಪತ್ಯೇಕ ಎರಡು ಅಪಘಾತದಲ್ಲಿ 8 ಜನ ಮೃತಪಟ್ಟಿದ್ದಾರೆ ಈ ಸಾವಿಗೆ ಅತಿ ವೇಗ ಮತ್ತು ಅಜಾಗರುಕತೆಯ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದ್ದು. ಮೃತ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next