Advertisement

Sept.30 : ಮಂಗಳೂರು ಜಿ.ಆರ್.ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಸೀಟು ಮರುಹಂಚಿಕೆ

08:54 PM Sep 29, 2023 | Team Udayavani |

ಬೆಂಗಳೂರು: ಡಿಗ್ರಿ ಕೋರ್ಸುಗಳಿಗೆ 2022  23ರಲ್ಲಿ ಮಂಗಳೂರಿನ ಜಿ.ಆರ್ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದಿದ್ದ 150 ಅಭ್ಯರ್ಥಿಗಳಿಗೆ ಸೆ. 30ರ ಬೆಳಿಗ್ಗೆ 11.00 ಕ್ಕೆ ಇಲ್ಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಗೆ ಹಾಜರಾಗಲು ಕೆಇಎ ಸೂಚಿಸಿದೆ.

Advertisement

ಸುಪ್ರೀಂಕೋರ್ಟ್ ಆದೇಶ ಹಾಗೂ ಸರ್ಕಾರದ ನಿರ್ದೇಶನದಂತೆ ಈ ಅಭ್ಯರ್ಥಿಗಳಿಗೆ ಇತರೆ ಕಾಲೇಜುಗಳಲ್ಲಿ ಸೀಟು ಮರು ಹಂಚಿಕೆಯಾಗಬೇಕಾಗಿರುತ್ತದೆ. ಈ ಕಾರಣದಿಂದಾಗಿ, ಅಭ್ಯರ್ಥಿಗಳಿಗೆ ಕೆಇಎ ಕಚೇರಿಗೆ ಹಾಜರಾಗಬೇಕೆಂದು ತಿಳಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಸದರಿ ಹಂಚಿಕೆಗೆ ಸಂಬಂಧಿಸಿದಂತೆ ಸೀಟ್ ಮ್ಯಾಟ್ರಿಕ್ಸ್‌ನ್ನು ಕೆಇಎ ವೆಬ್‌ಸೈಟಿನಲ್ಲಿ ಪ್ರಕಟಿಸಿರುವುದಾಗಿ ಹೇಳಲಾಗಿದೆ.

ಅಭ್ಯರ್ಥಿಗಳು 2022 23ನೇ ಸಾಲಿನಲ್ಲಿ ಕೆಇಎ ದಿಂದ ವಿತರಿಸಲಾದ ಪ್ರವೇಶ ಪತ್ರದ, ಜಿ.ಆರ್ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದಿರುವ ದಾಖಲಾತಿಗಳು, ಫೋಟೋ ಐಡಿ ಕಾರ್ಡ್ ಮತ್ತು ಸಂಬಂಧಿಸಿದ ಇತರೆ ದಾಖಲೆಗಳೊಂದಿಗೆ ಹಾಜರಾಗಬೇಕೆಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next